"ಸ್ವಾಮಿ ವಿವೇಕಾನಂದ" ಅಂತಿದ್ದ ಹಾಗೆ ನಮಗೇ ಗೊತ್ತಿಲ್ಲದಂತೆ ಅದೆಂಥದ್ದೋ ಗೌರವ ಭಾವ ಉಕ್ಕಿ ಬರುತ್ತೆ. ಅವರ ಬಗ್ಗೆ ಓದಿ ತಿಳಿದುಕೊಂಡವರಿಗೆ ಮಾತ್ರವಲ್ಲ, ಅವರ ಫೋಟೋ ನೋಡಿದವರಿಗೂ ಕೂಡ ಸ್ವಾಮಿಜಿ ಬಲು ಬೇಗ ಕನೆಕ್ಟ್ ಆಗಿ ಬಿಡುತ್ತಾರೆ. ಬಹುಷಃ ಭಾರತದ ಎಲ್ಲಾ ಮಹಾ ವ್ಯಕ್ತಿಗಳಿಗೂ ಒಂದಲ್ಲಾ ಒಂದು ರೀತಿಯಲ್ಲಿ ಸ್ವಾಮಿಜೀಯೇ ಸೂತರ್ಿ. ಜಾತಿ ಮತಗಳ ಪಗಂಡಗಳ ಎಲ್ಲಾ ಬೇಧ ಭಾವಗಳನ್ನೂ ಮೀರಿ 'ಭಾರತದ ಪ್ರತೀಕ'ವಾಗಿ ನಿಲ್ಲಬಲ್ಲ ಏಕಮಾತ್ರ ಮೂತರ್ಿ, "ಸ್ವಾಮಿ ವಿವೇಕಾನಂದ"ರು.
ನಮಗೆ ಸ್ವಾಮಿಜಿ ಓರ್ವ 'ಫಾರಿನ್ ರಿಟರ್ನ್ಡ್' ಅಂತ ಗೊತ್ತು, 'ಕೊಲೊಂಬೋ ಇಂದ ಆಲ್ಮೋರದವರೆಗೆ' ಮಿಂಚಿನಂತೆ ಸಂಚರಿಸಿದ್ದು ಗೊತ್ತು, ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಅನ್ನ ಸ್ಥಾಪಿಸಿದರು ಅಂತ ಗೊತ್ತು, ದಾಸ್ಯದ ಸಂಕೋಲೆಯಲ್ಲಿದ್ದ ಸಂತತಿಗೆ ಸ್ವಾಭಿಮಾನದ ಬೆಳಕು ಚೆಲ್ಲಿದರು ಅಂತಲೂ ಗೊತ್ತು. ಆದರೆ ಇದರ ಹಿಂದೆ ಅವರು ಪಟ್ಟಿದ್ದ ಶ್ರಮವನ್ನ ಗುರಿತುಸುವಲ್ಲಿ ಯಾಕೆ ಯಾವತ್ತೂ ನಾವು ಯೋಚನೆಯೇ ಮಾಡಲ್ಲ?! ವಿವೇಕಾನಂದರು ಸಂತರಾಗಿದ್ದು ಅದಾಗಲೇ ಇದ್ದ ಯಾವುದೋ ಒಂದು ಆಶ್ರಮದಲ್ಲಲ್ಲ, ತಾವೇ ನಿರ್ಮಿಸಿದ ಮಠದಲ್ಲಿ. ಆ ನೂತನ ಮಠಕ್ಕೆ ಯಾವದರ ಸೋಂಕು ಇಲ್ಲದಂತೆ(ಅಂದರೆ ಜಾತಿ, ರಾಜಕೀಯ...) ನೋಡಿಕೊಳ್ಳಬೇಕಾದ್ದು ಎಂಥಾ ಸವಾಲಿರಬಹುದು ಯೋಚಿಸಿದ್ದೀವಾ! ಕೇವಲ ಒಂದು ಊರಿನಲ್ಲಿ ಮಾತ್ರವಲ್ಲ, ಆ ಆಶ್ರಮದ ಬೇರು ಬೇರೆ ಬೇರೆ ರಾಜ್ಯಗಳಲ್ಲಿ, ಅಷ್ಟೇಕೆ, ದೇಶಗಳಲ್ಲಿ ಹಬ್ಬುವಂತೆ ಮಾಡಿದರಲ್ಲ, ಅದೇನು ಸಾಮನ್ಯದ ಸಂಗತಿಯೇ?! ದೇವರ ಸ್ಮರಣೆ ಮಾಡುತ್ತ ಮೋಕ್ಷದ ಬಾಗಿಲಿನ ಕಡೆ ಸಾಗಿದ್ದ ಯುವಕರನ್ನ 'ದೀನ ನಾರಾಯಣ'-'ಹೀನ ನಾರಾಯಣನ' ಸೇವೆ ಮಾಡುವ ಮೂಲಕ ಮುಕ್ತಿ ಮಾರ್ಗ ತಲುಪುವಂತೆ ಮಾಡಿದ್ದು ಸುಲಭವಾಗಿತ್ತೇ!? ಅದೆಲ್ಲಾ ಬಿಡಿ, ಯಾವ ಪರಕೀಯರ ಮಾತು ಕೇಳಿಕೊಂಡು ಭಾರತೀಯರು ಸನಾತನ ಮೌಲ್ಯವನ್ನೇ ಮರೆತಿದ್ದರೋ ಅಂಥ ಸನಾತನ ಪರಂಪರೆಯ ಕುರಿತಾಗಿ ಪರಕೀಯರೇ ಗೌರವ ನೀಡುವಂತೆ ಮಾಡಿಬಿಟ್ಟರಲ್ಲ ಸ್ವಾಮಿಜಿ, ವಾಹ್, ಇದಲ್ಲವೇ ನಿಜವಾದ ಸಾಧನೆ? ಇದೇ ತಾನೆ ರಾಷ್ಟ್ರ ಭಕ್ತಿ.
ಏನು, "ಅಮೇರಿಕಾದ ಸೋದರ ಸೋದರಿಯರೇ..." ಅಂದ ಮಾತ್ರಕ್ಕೆ ಜಗತ್ತನ್ನ ಈ ಮಹಾತ್ಮ ಗೆದ್ದುಬಿಟ್ಟ ಅಂತ ಭಾವಿಸಿದ್ದೀರ? ಅಷ್ಟೇ ತಾನೆ ಗೊತ್ತು ನಮಗೆ ಸ್ವಾಮಿಜಿಯ ಬಗ್ಗೆ. ಅಮೇರಿಕಕ್ಕೆ ಹೋದರು, ಜನಮನ ಗೆದ್ದರು, ಭಾಷಣ ಮಾಡಿ ಬಂದರು, ಆಶ್ರಮ ಸ್ಥಾಪಿಸಿ ಕಣ್ಮುಚ್ಚಿದರು. ಇದಾ ಸ್ವಾಮೀಜಿ ಜೀವನ? ಇಷ್ಟು ಸುಲಭವಾಗಿದ್ದದ್ದೇ ಇಲ್ಲ. ಅವರು ಜೀವನಕ್ಕೆ ಕೊಡೋ definationನ್ನೇ ಬೇರೆ, "ನಮ್ಮನ್ನ ಕೆಳಗೆಳಿಯುವ ಪರಿಸರ ಹಾಗೂ ಪರಿಸ್ಥಿತಿಗಳಿಂದ ಮೇಲೇಳುವುದೇ ಜೀವನ" ಅನ್ನೋ ಹೋರಟದ ಅರ್ಥ ಕೊಡೋ ಸ್ವಾಮಿಜಿ ಜೀವನದಲ್ಲಿ ಇನ್ನೆಷ್ಟು ಹೋರಾಡಿರಲಿಕ್ಕಿಲ್ಲ ಯೋಚಿಸಿ. ಬನ್ನಿ, ಸಾಧ್ಯವಾದರೆ ಅವರ ಕೆಲವು ಘಟನೆಗಳನ್ನ ನೋಡೋಣ.
ನರೇಂದ್ರ(ಸ್ವಾಮೀಜಿಯ ಪೂರ್ವದ ಹೆಸರು)ನ ತಂದೆ ತೀರಿಹೋಗಿದ್ದರು. ಮನೆಯಲ್ಲಿ ಊಟ ಬಟ್ಟೆಗೂ ಕಷ್ಟವಿತ್ತು. ನರೇಂದ್ರನೇ ಮನೆಯಲ್ಲಿ ಹಿರಿಯ. ಆಗಷ್ಟೆ ವ್ಯಾಸಂಗ ಮುಗಿದಿತ್ತು. ಎಲ್ಲೂ ಸರಿಯಾದ ಕೆಲಸ ಸಿಕ್ಕಿರಲಿಲ್ಲ. ಯಾವುದೋ ಪುಸ್ತಕ ಅನುವಾದಿಸೋ, ಯಾರೋ ವಕೀಲರ ಕೈಕೆಳಗೆ, ಹೀಗೆ ಚಿಕ್ಕ ಪುಟ್ಟ ಕೆಲಸ ಸಿಕ್ಕಿತು. ಅದು ಎರಡು ಹೊತ್ತಿನ ಊಟಕ್ಕೇ ಸಾಗುತ್ತಿತ್ತು. ಆದರೆ ಮನೆಯನ್ನ ನೋಡಿಕೊಳ್ಳುವುದು ಹೇಗೆ? ಈ ಥರ ಖಾಲಿ ಹೊಟ್ಟೆಯಲ್ಲಿ ಅದೆಷ್ಟು ಸಲ ದಾರಿ ಮಧ್ಯೆ ತಲೆ ಸುತ್ತು ಬಂದು ಕೂತಿದ್ದರೋ. ಒಮ್ಮೆ ಸುಧೀರ್ಘವಾಗಿ ಯೋಚಿಸಿ, ಇದಕ್ಕೆ "ಗುರು ರಾಮಕೃಷ್ಣ"ರೇ ಪರಿಹಾರವೆಂದುಕೊಂಡು ಅವರ ಹತ್ತಿರ ಬಂದ. "ಗುರುಗಳೇ, ನೀವು ದಯಮಾಡಿ, ನನಗೋಸ್ಕರ ನಿಮ್ಮ ಕಾಳಿಯ ಹತ್ತಿರ ನನಗೊಂದು ಕೆಲಸ ಕೊಡಿಸಿಕೊಡಿ" ಅಂತ ಕೇಳಿದ. ರಾಮಕೃಷ್ಣರು ಹೇಳಿದರು "ನೋಡು ನರೇನ್, ನಾನ್ಯಾವತ್ತೂ ಕಾಳಿಯನ್ನ ಅದು ಕೊಡು- ಇದುಕೊಡು ಅಂತ ಕೇಳಿಲ್ಲ. ಅದೇನೋ, ಕೇಳಲೂ ಬಾಯಿಯೂ ಬರಲ್ಲ. ಒಂದು ಕೆಲಸ ಮಾಡು. ಇವತ್ತು ರಾತ್ರಿ ನೀನೇ ಆ ಗರ್ಭಗುಡಿಗೆ ಹೋಗಿ, ನಿನಗದೇನು ಬೇಕೋ ಕೇಳಿಕೋ" ಅಂದರು. ನರೇಂದ್ರ ಅರಾಳವಾಗಿ ಇರುಳಿಗಾಗಿ ಕಾಯುತ್ತಾ ಕೂತ. ರಾತ್ರಿಯಾಯ್ತು. ಹೋದ ದೇವಸ್ಥಾನಕ್ಕೆ.
ಸಾಕ್ಷಾತ್ ಕಾಳಿ ನಿಂತಿದ್ದಾಳೆ ನರೇಂದ್ರನ ಮುಂದೆ. ಆನಂದಾಶ್ರುಗಳು ಹೊರಳಿತು ಕಣ್ಣಿಂದ. ದೀನನಾಗಿ ತಾಯಿಯ ಕಾಲಿಗೆರಗಿ ಬೇಡಿಕೊಂಡ "ಅಮ್ಮಾ, ನನಗೆ ಜ್ಞಾನಕೊಡು-ವೈರಾಗ್ಯ ಕೊಡು" ಅಂತ. ಅದೇ ಭಾವೋನ್ಮತ್ತತೆಯಲ್ಲಿ ಗುರುಗಳ ಹತ್ತಿರ ಬಂದ. ರಾಮಕೃಷ್ಣರು ಕೇಳಿದರು "ಏನಯ್ಯಾ? ಏನುನ್ನ ಕೇಳಿದೆ ಆಕೆನಾ? ಕೊಡ್ತೀನಿ ಅಂದ್ಲೋ?". ನರೇಂದ್ರ ಪೆಚ್ಚಾಗಿ ಹೇಳಿದ "ಅಯ್ಯೋ ಗುರುಗಳೇ, ಹಣಕೊಡು ಅನ್ನೋದನ್ನ ಮರೆತು ಜ್ಞಾನಕೊಡು ಅಂತ ಕೇಳಿಬಿಟ್ಟೆ. ಇನ್ನೊಂದು ಸರಿ ಒಳಗೋಗಿ ಕೇಳಲೇ?". ರಾಮಕೃಷ್ಣರು ಮತ್ತೆ ಒಳಗೆ ಕಳಿಸಿದರು. ಅದೇ ದೇವಿ ಸ್ಮಿತವದನಳಾಗಿ ನಿಂತಿದ್ದಾಳೆ. ಈಗ ನರೇಂದ್ರ ಕೇಳಿದ "ಅಮ್ಮಾ...ಅಮ್ಮ... ಇದೇ ಥರ ಯಾವಾಗ್ಲೂ ದರ್ಶನ ಭಾಗ್ಯ ನೀಡು. ಮತ್ತೇನು ಬೇಡ".
ಹೊರಬರುತ್ತಿದ್ದಂತೆಯೇ ಕೇಳಿದರು ರಾಮಕೃಷ್ಣರು "ಏನಯ್ಯಾ ನರೇನ್? ಕೊಡ್ತಾಳಂತ". ನರೇಂದ್ರ "ಅಯ್ಯೋ, ಗುರುಗಳೇ, ಇನ್ನೊಂದೇ ಒಂದು ಅವಕಾಶ ಕೊಡಿ, ಈ ಸಲವೂ ಮರೆತೇ ಹೋಯ್ತು. ಅವಳ ಪ್ರಸನ್ನ ಮುಖ ನೋಡ್ತಿದ್ರೆ ಕಷ್ಟಗಳೆಲ್ಲವೂ ಮರೆತೇ ಹೋಗುತ್ತೆ. ಇನ್ನೊಂದೇ ಒಂದು ಸಲ..." ಅಂತ ಗೋಗರೆದ. ರಾಮಕೃಷ್ಣರು ಕಳಿಸಿದರು. ಈ ಬಾರಿಯೂ ಚೈತನ್ಯಮಯಿ ಕಾಳಿ ನಿಂತಿದ್ದಾಳೆ. ನರೇಂದ್ರನಿಗೆ ತನ್ನ ಕಷ್ಟ ಹೇಳಿಕೊಳ್ಳಲು ನಾಚಿಕೆಯಾಗಿ "ಅಮ್ಮಾ, ನನಗೆ ಜ್ಞಾನ ಕೊಡು-ವೈರಾಗ್ಯಕೊಡು-ಇದೇ ಥರ ಸದಾ ದರ್ಶನ ಸೌಭಾಗ್ಯ ಕೊಡು, ಇನ್ನೇನು ಬೇಡ" ಅಂದು ಅಡ್ಡಬಿದ್ದು ಹೊರ ಬಂದು, "ಗುರುಗಳೇ, ನಾನೇನು ಮಾಡಲಿ, ಆ ಆದ್ಯಂತ ಪರಾಶಕ್ತಿಯ ಮುಂದೆ ಅಲ್ಪವಾದದ್ದನ್ನ ಕೇಳಲಾರೆ" ಅಂತ ಅಳಲಿದ. ಅವನ ಪರಿಸ್ಥಿತಿ ಅರ್ಥಮಾಡಿಕೊಂಡ ರಾಮಕೃಷ್ಣರು "ಆಯ್ತು, ಇರಲಿ ಹೋಗು, ಇವತ್ತಿಂದ ನಿನ್ನ ಮನೆಯವರಿಗ್ಯಾರಿಗೂ ಅನ್ನ ಬಟ್ಟೆಯ ಕೊರತೆ ಇರಲ್ಲ" ಅಂತ ಅಭಯ ನೀಡಿದರು.
ಹೊರಬರುತ್ತಿದ್ದಂತೆಯೇ ಕೇಳಿದರು ರಾಮಕೃಷ್ಣರು "ಏನಯ್ಯಾ ನರೇನ್? ಕೊಡ್ತಾಳಂತ". ನರೇಂದ್ರ "ಅಯ್ಯೋ, ಗುರುಗಳೇ, ಇನ್ನೊಂದೇ ಒಂದು ಅವಕಾಶ ಕೊಡಿ, ಈ ಸಲವೂ ಮರೆತೇ ಹೋಯ್ತು. ಅವಳ ಪ್ರಸನ್ನ ಮುಖ ನೋಡ್ತಿದ್ರೆ ಕಷ್ಟಗಳೆಲ್ಲವೂ ಮರೆತೇ ಹೋಗುತ್ತೆ. ಇನ್ನೊಂದೇ ಒಂದು ಸಲ..." ಅಂತ ಗೋಗರೆದ. ರಾಮಕೃಷ್ಣರು ಕಳಿಸಿದರು. ಈ ಬಾರಿಯೂ ಚೈತನ್ಯಮಯಿ ಕಾಳಿ ನಿಂತಿದ್ದಾಳೆ. ನರೇಂದ್ರನಿಗೆ ತನ್ನ ಕಷ್ಟ ಹೇಳಿಕೊಳ್ಳಲು ನಾಚಿಕೆಯಾಗಿ "ಅಮ್ಮಾ, ನನಗೆ ಜ್ಞಾನ ಕೊಡು-ವೈರಾಗ್ಯಕೊಡು-ಇದೇ ಥರ ಸದಾ ದರ್ಶನ ಸೌಭಾಗ್ಯ ಕೊಡು, ಇನ್ನೇನು ಬೇಡ" ಅಂದು ಅಡ್ಡಬಿದ್ದು ಹೊರ ಬಂದು, "ಗುರುಗಳೇ, ನಾನೇನು ಮಾಡಲಿ, ಆ ಆದ್ಯಂತ ಪರಾಶಕ್ತಿಯ ಮುಂದೆ ಅಲ್ಪವಾದದ್ದನ್ನ ಕೇಳಲಾರೆ" ಅಂತ ಅಳಲಿದ. ಅವನ ಪರಿಸ್ಥಿತಿ ಅರ್ಥಮಾಡಿಕೊಂಡ ರಾಮಕೃಷ್ಣರು "ಆಯ್ತು, ಇರಲಿ ಹೋಗು, ಇವತ್ತಿಂದ ನಿನ್ನ ಮನೆಯವರಿಗ್ಯಾರಿಗೂ ಅನ್ನ ಬಟ್ಟೆಯ ಕೊರತೆ ಇರಲ್ಲ" ಅಂತ ಅಭಯ ನೀಡಿದರು.
ಅದಾದ ಮೇಲು ನರೇಂದ್ರನ ಕಷ್ಟ ಮಾತ್ರ ತಪ್ಪಲಿಲ್ಲ. ರಾಮಕೃಷ್ಣರು ದೈವಾಕ್ಯವಾಗುವ ಮುನ್ನ ನರೇಂದ್ರ ಹಾಗೂ ಇನ್ನಿತರ ಯುವಕರಿಗೆ ಸನ್ಯಾಸ ದೀಕ್ಷೆಯನ್ನ ಸ್ವೀಕರಿಸುವಂತೆ ಸೂಚಿಸಿದ್ದರು. ಆ ಯುವಕರು "ಗುರುಗಳು ಹೇಳಿದ್ದಾರೆ, ನಾವು ಸನ್ಯಾಸಿಗಳಾಗ್ತೇವೆ" ಅಂದರೆ, "ಅಲ್ಲಯ್ಯಾ, ಸ್ವತಃ ರಾಮಕೃಷ್ಣರೇ ಸಂಸಾರಿಗಳು, ಅವರು ಸನ್ಯಾಸದೀಕ್ಷೆ ಕೊಡೋದೆ" ಅಂತ ನಕ್ಕು ಕೈ ಚೆಲ್ಲಿದರು ರಾಮಕೃಷ್ಣರ ಭಕ್ತರು. ಈಗ ಅವರಾರ ಸಹಾಯವೂ ಇಲ್ಲದೆ ಮಠ ಸ್ಥಪಿಸಬೇಕಾದ ಜವಾಬ್ದಾರಿ ನರೇಂದ್ರನದಾಯ್ತು. ಯುವಕರಿಲ್ಲಿ ಒಂದು ಕ್ಷಣವೂ ಸನ್ಯಾಸದ ಆದರ್ಶ ಮರೆಯಾಗದಂತೆ ಅವರಿಗೆ ನರೇಂದ್ರ ಇಂಬುಕೊಡುತ್ತಿದ್ದ, ಅದಕ್ಕಗಿ ಸಾಕಷ್ಟು ನಿಂದನೆ ಅನುಭವಿಸಿದ್ದ.
ನಂತರ ಪರಿವ್ರಾಜಕರಾದಾಗಲಂತೂ ಪಾಳು ಗುಡಿಗಳಲ್ಲಿ, ಹಾಳು ಗುಡಿಸಲುಗಳಲ್ಲಿ ಕಾಡಿನ ಮಧ್ಯದಲ್ಲಿ ವಾಸವಿದ್ದುಬಿಡುತ್ತಿದ್ದರು. ಇವರೆಲ್ಲೂ ಭಿಕ್ಷೆ ಕೇಳಿಪಡೆಯುತ್ತಿರಲಿಲ್ಲ, ಜನ ಅವರಾಗಿಯೇ ಹಾಕುತ್ತಿರಲಿಲ್ಲ. ಆಗೆಲ್ಲ ಅದೆಷ್ಟೆಷ್ಟು ದಿನಗಳು ಉಪವಾಸವಿದ್ದರೋ! ಒಮ್ಮೆಯಂತು ಹೊಟ್ಟೆ ಹಸಿದು ಪ್ರಾಣವೇ ಹೋಗುವಂತಿದ್ದಾಗ, ಯಾರೋ ಒಬ್ಬ ತನ್ನ ಹತ್ತಿರವಿದ್ದ ರೊಟ್ಟಿ ಚಟ್ನಿ ಕೊಟ್ಟ. ಹಸಿದಿದ್ದರಲ್ಲ, ಒಂಚೂರು ಹೆಚ್ಚಿಗೆಯೇ ಬಾಯಿಗೆ ಹಾಕಿಕೊಂಡರೇನೋ, ಆ ಚಟ್ನಿಯ ಖಾರ ಹೊಟ್ಟೆಯನ್ನೇ ಸುಟ್ಟು ಹಾಕುವಂತಿತ್ತಂತೆ. ಕುಡಿಯಲು ನೀರೂ ಸಿಗದೆ ವದ್ದಾಡಿದ್ದರು.
ಅಷ್ಟೆಲ್ಲಾ ಯಾಕೆ? ಕನ್ಯಾಕುಮಾರಿಯಲ್ಲಿ ಸ್ವಾಮಿಜಿಯ ಬಂಡೆಯಿದೆಯಲ್ಲಾ ಅದನ್ನ ಸ್ವಾಮಿಜಿ ಈಜಿಕೊಂಡೇ ತಲುಪಿದ್ದು. ಯಾಕೆಂದರೆ ಅಲ್ಲಿಗೆ ಕರೆದೊಯ್ಯಬೇಕಿದ್ದ ಅಂಬಿಗರಿಗೆ ಕೊಡಲು ಜೇಬಲ್ಲಿ ಬಿಡಿಗಾಸಿರಲಿಲ್ಲ. ಅಂಥಾ ಸ್ವಾಮೀಜಿ, ಇನ್ನಷ್ಟು ಕಷ್ಟಕಟ್ಟು, ದೇವಿಯ ಕೃಪೆಯಿಂದ, ರಾಮಕೃಷ್ಣರ ಆಶೀವರ್ಾದದಿಂದ ಅಮೇರಿಕೆಗೆ ಹೋದರು. ಅಲ್ಲೇನು ಹೋದ ಕೂಡಲೇ 'ರೆಡ್ ಕಾಪರ್ೆಟ್' ಹಾಸಿ ಸ್ವಾಮಿಜಿಯನ್ನ ಸ್ವಾಗತಿಸಲಿಲ್ಲ. ಇವರು ಭಾಗವಹಿಸಬೇಕಿದ್ದ ಸಮ್ಮೇಳನವಿದ್ದದ್ದು ಸೆಪ್ಟಂಬರ್ನಲ್ಲಿ, ಆದರೆ ಆ ವಿಚಾರ ಸರಿಯಾಗಿ ಖಾತ್ರಯಾಗದೆ ಎರಡು ತಿಂಗಳು ಮೊದಲೇ, ಅಂದರೆ, ಜುಲೈಗೇ ಅಮೇರಿಕಾಕ್ಕೆ ಹೋಗಿದ್ದರು. ಕೈಯಲ್ಲಿ ಕಾಸಿಲ್ಲ, ಯಾರೊಬ್ಬರ ಪರಿಚಯವಿಲ್ಲ. ಆ ವಿಶಾಲ ದೇಶದಲ್ಲಿ ಒಂಟಿಯಾಗಿಬಿಟ್ಟಿದ್ದರು ನಮ್ಮ ಸ್ವಾಮೀಜಿ.
ಆ ಅನ್ಯದೇಶದಲ್ಲಿ ಸ್ವಾಮೀಜಿ ದಾರಿಯಲ್ಲಿ ಹೋಗುತ್ತಿದ್ದರೆ ಪೋಲಿ ಹುಡುಗರು ಪೇಟ ಎಳೆಯುತ್ತಿದ್ದರು, ಬೀದಿ ಹುಡುಗರು ಕೆಟ್ಟದಾಗಿ ಹೀಯಾಳಿಸುತ್ತಿದ್ದರು, ಸಭ್ಯ ಅಮೇರಿಕನ್ನರೂ ಸಹ ಅನಾಗರೀಕರಂತೆ ವತರ್ಿಸಿದರು. ಒಮ್ಮೆಯಂತೂ ಸ್ವಾಮೀಜಿ ಅಮೇರಿಕದಲ್ಲಿ ನಿರಾಶ್ರಿತರಿಗೆ ಅಂತ ಮೀಸಲಿರುವ ಗೂಡ್ಸ್ ವ್ಯಾಗನ್ನಲ್ಲೇ ಮಲಗಿದ್ದರು.
ಸ್ವಾಮೀಜಿ ನೇರವಾಗಿ ಹೋಗಿದ್ದು ಚಿಕಾಗೋ ನಗರಕ್ಕೆ. ಆದರೆ ಅದು ದುಬಾರಿ ಅಂತ ಭಾವಿಸಿ ಬಾಸ್ಟನ್ ನಗರಕ್ಕೆ ಹೊರಟರು. ಆಗ ಅವರಿಗೆ ರೈಲಲ್ಲಲಿ ಪರಿಚಯವಾದ 'ಮಿಸ್ ಕ್ಯಾಥರಿನ್ ಆಬಟ್ ಸ್ಯಾನ್ಬಾನರ್್' ಎಂಬಾಕೆ ಸ್ವಾಮಿಜಿಯ ವಿದ್ವತ್ತನ್ನ ಗುತುತಿಸಿ, ತನ್ನ ಮನೆಗೆ ಆಹ್ವಾನಿಸಿದಳು. ಅಲ್ಲಿ, ಅವಳೂ ಹೇಗೂ ಗ್ರಂಥಕತರ್ೆಯಾಗಿದ್ದರಿಂದ, ಸ್ವಾಮಿಜಿಗೆ ಒಂದಷ್ಟು ಜನ ದೊಡ್ಡಮನುಷ್ಯರ ಲಿಂಕ್ ಸಿಕ್ಕಿತು. ಆಗಲೇ ಹಾರ್ವಡರ್್ ಯೂನಿವಸರ್ಿಟಿಯ ಪ್ರೋಫéೇಸರ್, ಡಾ.ರೈಟ್, ಸ್ವಾಮಿಜಿ 'ಸಮ್ಮೇಳನದಲ್ಲಿ ಮಾತಾಡೋ ಅವಕಾಶವನ್ನ ಬಳಸಿಕೊಳ್ಳೋಕೆ ನನ್ನ ಹತ್ತಿರ ಪರಿಚಯ ಪತ್ರವಿಲ್ಲ' ಅಂದಾಗ ಆ ಪ್ರೋಫéೇಸರ್ "ಸ್ವಾಮೀಜಿ, ನಿಮ್ಮ ಹತ್ರ ಪರಿಚಯ ಪತ್ರ ಕೇಳೋದು ಒಂದೆ, ಸೂರ್ಯನನ್ನ ನೀನ್ಯಾಕಯ್ಯ ಬೆಳಕನ್ನ ಕೊಡ್ತೀಯಾ? ಅಂತ ಕೇಳೊದು ಒಂದೆ" ಅಂತ ಹೊಗಳಿ "ನೀವು ಸಮ್ಮೇಳನದಲ್ಲಿ ಮಾತಾಡಲೇ ಬೇಕು" ಅಂತ ಇವನೇ ಒಂದು ಪತ್ರ ಬರೆದುಕೊಟ್ಟ. ದುರಾದೃಷ್ಟವಷಾತ್ ಆ ಪತ್ರವೂ ಕಳೆದು ಹೋಗಿ, ಸ್ವಾಮೀಜಿ ಅಮೇರಿಕದ ಬೀದಿಗಳಲ್ಲಿ ಕೈ ಕೈ ಹಿಚುಕಿಕೊಳ್ಳಬೇಕಾಯ್ತು.
ದಾರಿ ಗೊತ್ತಿಲ್ಲ, ದೆಸೆ ಗೊತ್ತಿಲ್ಲ, ಎಲ್ಲಿ ಹೋಗಿ ಏನು ಮಾಡಬೇಕು ಸ್ವಾಮೀಜಿ ಆ ಚಿಕಾಗೋದಲ್ಲಿ?ಸಮ್ಮೇಳನ ಅಡ್ರೆಸ್ ಕೇಳಿದರೂ ಕೂಡ ಯಾರೊಬ್ಬರೂ ಹೆಳಲಿಲ್ಲ ಸ್ವಾಮಿಜಿಗೆ. ಸುತ್ತಾಡಿ ಸುತ್ತಾಡಿ ಸಾಕಾಗಿ ಆಯಾಸ ತಾಳಲಾರದೆ ಸುಸ್ತಾಗಿ ರಸ್ತೆಯ ಬದಿಗೇ ಕೂತರು. ಭಗವದ್ಕೃಪೆ, ಅವರು ಕೂತಿದ್ದ ಬೀದಿಯ ಎದುರಿಗೇ ಇದ್ದ ಬಂಗಲೆಯ ವೃದ್ಧ ಮಹಿಳೆ, ಬೆಲ್ಹೇಲ್ ಎಂಬಾಕೆ, ಸ್ವಾಮೀಜಿಯನ್ನ ಗೌರವದಿಂದ ತನ್ನ ಬಂಗಲೆಯೊಳಗೆ ಕರೆದೊಯ್ದು, ಉಪಚರಿಸಿ, 'ನಿಮಗೆ ಸಮ್ಮೇಳನದಲ್ಲಿ ಮಾತಾಡೋ ಅವಕಾಶ ಕೊಡಿಸೋ ಜವಾಬ್ದಾರಿ ನನ್ನದು' ಅಂದಳು. ಅಂತೆಯೇ ಸ್ವಾಮೀಜಿ ಭಾರತದ ಇತಿಹಾಸದ ಪುಟದಲ್ಲಿ ಸ್ವಣರ್ಾಕ್ಷರದಲ್ಲಿ ಬರೆದಿಡುವಂತೆ ಸೆಪ್ಟಂಬರ್ 11, 1893 ರಲ್ಲಿ ಭಾರತವನ್ನ ಜಗತ್ತಿಗೆ ಪರಿಚಯಿಸಿದರು.
ಈ ಸಮ್ಮೇಳನಾನಂತರವೇನು ಸ್ವಾಮೀಜಿಯ ಜೀವನ ಸುಖಮಯವಾಗಿದ್ದಿಲ್ಲ. ಜೀವನ ಪರ್ಯಂತ ಇಂಥದ್ದೇ ಹೋರಟಗಳನ್ನ ನಡೆಸಿದ್ದಾರೆ. ಅಷ್ಟೆಲ್ಲ ಕಷ್ಟಗಳನ್ನ ಜಯಿಸಿದ್ದಕ್ಕಾಗಿಯೇ ಇಂದು ಅವರನ್ನ "ವಿಶ್ವವಿಜೇತ" ಅನ್ನೋದು, ಇವತ್ತಿಗೂ ಅವರ ಜನ್ಮದಿನವನ್ನ "ರಾಷ್ಟ್ರಿಯ ಯುವದಿನ"ವನ್ನಾಗಿ ಆಚರಿಸುವ ಮೂಲಕ ಸ್ಮರಿಸುತ್ತಿರೋದು. ಆ ಅದಮ್ಯ ಚೇತನಕ್ಕೆ ಅನಂತ ನಮನ...
"...ನೀನು ಮಿಂಚೈ! ನೀನು ಸಿಡಿಲೈ! ಮೊಳಗು ಸನ್ಯಾಸಿ-
ಓಂ! ತತ್! ಸತ್! ಓಂ!..."
-ನಾದೀ
ಓಂ! ತತ್! ಸತ್! ಓಂ!..."
-ನಾದೀ
No comments:
Post a Comment