Sunday, 29 May 2016

ತುಂಬಾ ನಾಟಿದ ಹಾಡು...

  ನಾವು ಹಾಡುಗಳನ್ನ ಬಹಳಷ್ಟು ಸಲ ಕೇಳಿರ್ತೀವಿ, ಆನಂದಿಸಿರ್ತೀವಿ. ಆದರೆ ಕೆಲವೊಮ್ಮೆ ಮಾತ್ರ ಅವುಗಳನ್ನ 'ಹೌದು' ಅಂತ ಒಪ್ಪಿಕೊಳ್ತೀವಿ, ಯಾವಾಗ ಅವು ನಮ್ಮ ಸ್ವಾನುಭವಕ್ಕೆ ಬರುತ್ತವೋ ಆಗ.
ಈಗ ತಾನೇ ಹಲವು ಬಾರಿ ಕೇಳಿದ್ದ ಈ ಹಾಡು ಈಗಷ್ಟೇ ಸ್ನಾನ, ಜಪ ತಪ ಪೂಜೆಯನ್ನ ಮುಗಿಸಿ, ಹೊಸ ಬಟ್ಟೆಯುಟ್ಟ ಶಿವಸಮಾನ ಸನ್ಯಾಸಿಯಂತೆ ಹೊಸ ರೂಪಿನಲಿ ನಿಂತು ಬೋಧಿಸಿತು. ನಿಮಗೂ ಆ ಹಾಡು ಅಷ್ಟೇನು ಅಪರಿಚಿತವಲ್ಲ, ಜಿ.ಎಸ್. ಶಿವರುದ್ರಪ್ಪ ಅವರ ಕವನ,
''ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ...''
ಹೌದು ತಾನೆ...
ಎಲ್ಲಿದ್ದಾನೆ ಭಗವಂತ?
ಮನುಷ್ಯರ ಕೈಗೆ ಸಿಗಬಾರದು ಅಂತ mobile network ಕೂಡ ಸಿಗದಿರೋ ಕೈಲಾಸ ವೈಕುಂಠಗಳಲ್ಲಿ ಸರಸವಾಡ್ತಾ ಕೂತಿದ್ದಾನಾ? 'ಒಂದೇ ಮನಸ್ಸಲ್ಲಿ ಕೂಗಿ ಕರೀಲಿ, ಅಲ್ಲೇ ಹಾಜರ್ ಹಾಕ್ತೀನಿ' ಅಂತ ಹಠ ಹಿಡಿದಿದ್ದಾನ? 'ಓ ಈ ಮೇಷ್ಟ್ರು ಕಳೆದ ಜನ್ಮದಲ್ಲಿ ರಾಜನ ಥರ ಮೆರೀತಿದ್ದ, so ಈ ಜನ್ಮದಲ್ಲಿ ಕಷ್ಟ ಪಡಲಿ' ಅಂತ ನಲವತ್ತಕ್ಕೇ ಕಣ್ಣು ಕಿತ್ಕೊಂಡು, ನಾಲ್ಕೈದು ಹೆಣ್ಣು ಮಕ್ಕಳನ್ನಕೊಟ್ಟು, costly ಔಷಧಿಯ ಕಾಯಿಲೆ ಕೊಡ್ತಾನ?
ಅಲ್ಲ, ನಮ್ಮಲ್ಲಿ ಕೆಲವು ಮನುಷ್ಯರಿದ್ದಾರೆ. ನಿನ್ನೆ ಮಾಡಿದ ಅಪಚಾರವನ್ನ ಇವತ್ತೇ ಮರೆತು ನಾಳೆ ಸಹಾಯ ಮಾಡುವಂಥವರು. ಅಂಥ ಬುದ್ಧಿ ಕೊಟ್ಟ ಭಗವಂತನೇ ಆ ಬುದ್ಧಿಯಿಲ್ಲದೆ ಈ ಥರ ವರ-ಶಾಪ-ಪರಿಹಾರ ಅಂತ 'ಹುಲಿ ಕಟ್ಟೆ' ಆಟ ಆಡ್ತಾನ್ಯೆ??
ಅದ್ಸರಿ, ಈ ದೇವರ concept ಏನು ಹೇಳಿ? ಪವಾಡ ಮಾಡೋದೇ? ಅಲ್ಲ. ಮತ್ತೇನು? ನಂಬಿ ಬಂದವರನ್ನ ಕಾಪಾಡೋದು. ಕೆಲವರು ಹೇಳುವಂತೆ, ಎಷ್ಟು ಸೇವೆ ಮಾಡ್ತಾರೋ ಆ ಸೇವೆಯ ಫಲಕ್ಕೂ ಮತ್ತು ಪಾಪಕರ್ಮಕ್ಕೂ ಸರಾಸರಿ ಅಳತೆ ಮಾಡಿ, ಅಷ್ಟು ಕಷ್ಟವನ್ನ ನಷ್ಟಗೊಳಿಸೋದು. ಅವನೇ ತಾನೆ ದೇವರು? ok. accepted. ಅಂಥ ದೇವರು ಗುಡಿಯೊಳಗೆ ಯಾಕೆ ಬಂಧಿಯಾಗಿರಬೇಕು? early morning to late night ತನಕ ಯಾಕೆ ಆ ಕತ್ತಲ ಕೋಣೇಲಿ, ಆ ಪೂಜೆ ಮಾಡೋನ ಜೊತೆಲಿ ಇರಬೇಕು? ಬರಲಿ ಬಿಡಿ ಹೊರಗೆ. ಭಕ್ತನೇ ಬಂದು ಹರಕೆ ಕಟ್ಟಿ ಹೋಗೋ ತನಕ ನಾನು ಸಹಾಯಕ್ಕೆ ಬರೊಲ್ಲ ಅನ್ನೊ ಮೊಂಡಾಟ ಯಾಕೆ ಹೇಳಿ ಈ ದೇವರಂಥಾ ದೇವರಿಗೆ??!!!
ಕಷ್ಟ ಮತ್ತೆ ಸುಖ ನಮಗೆ, ಅಂದರೆ, ಮನುಷ್ಯರಿಗೆ ಬೇರೆ ಬೇರೆ. ಆದರೆ ಭಗವಂತನಿಗೆ ಅವೆರಡೂ ಒಂದೆ. ಅವನಿಗೆ ಚೆನ್ನಾಗಿ ಗೊತ್ತಿದೆ, ಯಾರಿಗೆ ಯಾವ ಕಷ್ಟ ಅಥವಾ ಯಾವ ಸುಖ, ಯಾವಗ ಕೊಡಬೇಕು ಅಂತ. ನೆನಪಿಡಿ, ನೀವಿಗ ಕಷ್ಟದಲ್ಲಿದ್ದೀರಿ ಅಂದರೆ ಖುಷಿಪಡಿ, ನಿಮಗೆ ಇಷ್ಟರಲ್ಲೆ ಪರಮ ಸುಖ ಒದಗಿ ಬರಲಿದೆ. ಖುಷಿಯಾಗಿರುವವರು ಮುಂಬರಲಿರುವ ಕಷ್ಟಕ್ಕೆ ಈಗಲೇ ಎದೆಗಟ್ಟಿಮಾಡಿಕೊಳ್ಳಿ. ಎರಡೂ ಶಾಶ್ವತವಲ್ಲ, ಸುಖ as well as ದುಃಖ.
ಕ್ಷಮಿಸಿ, ಇದನ್ನೆಲ್ಲಾ ಹೇಳುವಷ್ಟು ಪ್ರೌಢ್ಯತೆ ನನಗಿಲ್ಲ. ಹೇಳಬಾರದು ಕೂಡ. ನಾನು ಹೇಳಬಂದದ್ದು G.S.S ಅವರು ದೇವರನ್ನ ಹೇಗೆ ಗುರುತಿಸಿದ್ದಾರೆ ಅಂತ. 'ಪ್ರೀತಿ ಮತ್ತು ಸ್ನೇಹ' ಇವೇ ಅಂತೆ ದೈವದ ಸ್ವರೂಪ. ಅಲ್ಲದೆ ಮತ್ತೇನು? ಅಮ್ಮನ ಪ್ರೀತಿ, ಅಪ್ಪನ ಸ್ನೇಹ. ಹೆಂಡತಿ ಪ್ರೀತಿ, ಮಕ್ಕಳ ಸ್ನೇಹ. ಹಿರಿಯರ ಪ್ರೀತಿ, ಗೆಳೆಯರ ಸ್ನೇಹ, ಇನ್ನೇನು ಬೇಕು ಹೇಳಿ ಆನಂದಮಯ ಜೀವನಕ್ಕೆ? ಎಂದಿಗೂ ಸಾಕೆನಿಸದ ಪ್ರೀತಿ, ಸತತವೂ ಬೇಕೆನಿಸುವ ಸ್ನೇಹ, ಇವುಗಳಿಗಿಂತಲೂ ಮಿಗಿಲಾದ್ದು ಎಷ್ಟು ಲಕ್ಷ ಕೋಟಿ ಕೊಟ್ಟರೆ ಸಿಕ್ಕೀತು ಹೇಳಿ. ಸರಿ, ಇದೆಲ್ಲವೂ ಎಲ್ಲರಿಗೂ ಸಿಕ್ಕೀತೆ? ಬಹುಶಃ ಎಲ್ಲರಿಗೂ ಸಿಗಲಾರದು. ಆದರೆ, ಸಿಕ್ಕಷ್ಟನ್ನಾದರೂ ಸಂತಸದಿಂದ ಅಪ್ಪಿಕೊಳ್ಳ ಬೇಕು. ಅವುಗಳನ್ನ ಅರಸುತ್ತ ಹೋಗುವುದೇ ಭಗವದನ್ವೇಷಣೆ. ಸಿಕ್ಕ ಮೇಲೆ ಮಿಕ್ಕವರಿಗೆ ಹಂಚುವುದೇ ವಿಮೋಚನೆ. ಇದೇ ತಾನೆ ಸನಾತನ ಪರಂಪರೆಯ ಆದರ್ಶ? ಪ್ರೀತಿಸುವುದು ಪ್ರತಿ ಮಾನವನ ಆದ್ಯ ಉದ್ದೇಶವಾಗಬೇಕು, ದೇಶಕಾಲಾತೀತವಾಗಿ.
ಹತ್ತಿರವಿದ್ದೂ ದೂರ ನಿಲ್ಲುವೆವು,
ನಮ್ಮ ಅಹಂಮಿನ ಕೋಟೆಯಲಿ,
ಎಷ್ಟು ಕಷ್ಟವೋ ಹೊಂದಿಕೆಯೆಂಬುದು,
ನಾಲ್ಕು ದಿನದ ಈ ಬದುಕಿನಲ್ಲಿ....
mostly ನಮ್ಮ ನೆಂಟ-ಅಥವಾ ಗೆಳಯನನ್ನ ಉದ್ದೇಶಿಸಿ ಬರೆದಿದ್ದಾರೇನೋ ಅನಿಸುತ್ತೆ ಅಲ್ವೆ? ಅಲ್ಲ, ಆ ಸಾಲು ಬರೆದಿರೋದು ನಮಗೆ. ನಾವೆ ಆ lineಗಳಿಗೆ ಹೋಲಿಕೆಯಾಗೋದು. ಬರೀ ಇನ್ನೊಬ್ಬರ ತಪ್ಪು, ಕೀಳು ಮನಸ್ಥಿತಿ, ಅವತಾರ, ಅವಂತರಗಳನ್ನ ಅವರಿಗೆ ಹೇಳಿಕೊಳ್ಳದೆ, ನಾವು ಅನುಭವಿಸದೆ, ಒಳಗೊಳಗೇ ಬೈದುಕೊಂಡು, ಅವರಿವರ ಹತ್ತಿರ ಆಡಿಕೊಂಡು ತಿರುಗಾಡ್ತೀವಲ್ಲ, ಹಾಗಾಗಿ ನಮಗೇ ಬರೆದ ಸಾಲು ಅದು. ಯಾರನ್ನಾದರು ದೂಷಿಸುವ ಮುನ್ನ ಆ ವ್ಯಕ್ತಿ ನೀವೇ ಆಗಿದ್ದರೆ ಬೈಕೋತಿದ್ರಾ ಅಂತ ಯೋಚಿಸಿ, ಇನ್ನೊಬ್ಬರು ಹೀಗೆ ಮಾಡ್ಬಿಟ್ರು ಅಂತ ಎಗರಾಡುವಾಗ ಅವರ ಜಾಗದಲ್ಲಿ ನೀವಿದ್ದಿದ್ರೆ ಏನು ಮಾಡ್ತಿದ್ರಿ ಯೋಚಿಸಿ. ಹಾಗೆ ಕಲ್ಪನೆ ಮಾಡಿಕೊಳ್ಳಿ, ನೀವು ದ್ವೇಷಿಸುವ ವ್ಯಕ್ತಿಗಳ ಅದೆಷ್ಟು ಗುಣದೋಷಗಳು ನಿಮ್ಮಲ್ಲೇ ನೀವು ಗುರುತಿಸಿಕೊಂಡಿಲ್ಲಾ? ಇಷ್ಟೆಲ್ಲ ಹೇಳುವ ನಾನೇನು ಸಾಚ ಅಲ್ಲ ಬಿಡಿ, ನಾನು ನಿಮ್ಮಂಥವನೆ. ಆದರೆ ಈಗ ಹೊಸದೊಂದು ದಾರಿ ತೊರಿಸಿಬಿಟ್ಟರು G.S.S.
ಶ್ರೀ ಶಾರದಾಮಾತೆ ಹೇಳಿದ್ದಾರೆ, ''ಪರರ ಅವಗುಣಗಳನ್ನ ಪರಿಗಣಿಸದಿರಿ'' ಅಂತ. ಇನ್ನುಮುಂದೆ ಕೇವಲ ಒಳಿತನ್ನೇ ಗ್ರಹಿಸುವ ಪ್ರಯತ್ನವನ್ನ ನಾನಂತೂ ಈಗಿಂದಲೇ ಸಂಕಲ್ಪ ಮಾಡ್ತೇನೆ. ನೀವು ಮಾಡಿ ಅಂತ ಹೇಳಲ್ಲ. ಮುಂದೆ, ಈ ಹಾಡು ನಿಮ್ಮ ಮೇಲೂ ಪ್ರಭಾವ ಬೀರದಿರದು ಅಂತ ನನಗೆ ಭರವಸೆ ಇದೆ...
ಜೀವನ ನಾಲ್ಕುದಿನದ್ದಂತೆ, ಹಗಲು- ಮಧ್ಯಾಹ್ನ-ಸಂಧ್ಯೆ ಇರಳುಗಳು ಒಂದೇ ದಿನದೊಳಗೆ ಇರುವಂತೆ. ಹೆಚ್ಚುಕಡಿಮೆ ನಮ್ಮ ಜೀವನದ ತಿಳಿ ಬೆಳಗು ಮರೆಯಾಗಿ, ಬಿಸಿಲು ನೆತ್ತಿಸುಡುವ ಹೊತ್ತು ಇದು. ಆಗಲಿ, ಕಷ್ಟಕ್ಕೆ ತಯಾರಾಗೋಣ. ಆಗ ಸುಖ ಬಂದರೂ manage ಮಾಡಬಹುದು. ಅಕಸ್ಮಾತ್ ಕಷ್ಟವೇ ಬಂತು ಅಂತ ಇಟ್ಕೊಳಿ, ಬರ್ತಾನೆ, ಗರ್ಭಗುಡಿಯ ನಿರ್ಭಂಧವನ್ನ ಮಡಿಬಟ್ಟೆಯಂತೆ ಮೂಲೆಗೊಗೆದ ಭಗವಂತ, ಯಾವುದೋ ಮನುಷ್ಯ ರೂಪ ಧರಿಸಿ....
ಇಲ್ಲಿದೆ ನಂದನ
ಇಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ...
''ಈಶಾವಾಸ್ಯಮಿದಂ ಸರ್ವಂ'' ಕಷ್ಟ ಸುಖ, ನೋವು ನಲಿವು, ಹುಟ್ಟು ಸಾವು ಎಲ್ಲವೂ ದೈವದ ಅಭಿವ್ಯಕ್ತಿಯೇ. ಎಲ್ಲವನ್ನೂ ಆನಂದಿಸೋಣ.
ನಾದೀ

ಇದಕ್ಕೇ ಸ್ವಾಮೀಜಿಯನ್ನ "ಧೀರ ಸಂತ" ಅನ್ನೋದು...


"ಸ್ವಾಮಿ ವಿವೇಕಾನಂದ" ಅಂತಿದ್ದ ಹಾಗೆ ನಮಗೇ ಗೊತ್ತಿಲ್ಲದಂತೆ ಅದೆಂಥದ್ದೋ ಗೌರವ ಭಾವ ಉಕ್ಕಿ ಬರುತ್ತೆ. ಅವರ ಬಗ್ಗೆ ಓದಿ ತಿಳಿದುಕೊಂಡವರಿಗೆ ಮಾತ್ರವಲ್ಲ, ಅವರ ಫೋಟೋ ನೋಡಿದವರಿಗೂ ಕೂಡ ಸ್ವಾಮಿಜಿ ಬಲು ಬೇಗ ಕನೆಕ್ಟ್ ಆಗಿ ಬಿಡುತ್ತಾರೆ. ಬಹುಷಃ ಭಾರತದ ಎಲ್ಲಾ ಮಹಾ ವ್ಯಕ್ತಿಗಳಿಗೂ ಒಂದಲ್ಲಾ ಒಂದು ರೀತಿಯಲ್ಲಿ ಸ್ವಾಮಿಜೀಯೇ ಸೂತರ್ಿ. ಜಾತಿ ಮತಗಳ ಪಗಂಡಗಳ ಎಲ್ಲಾ ಬೇಧ ಭಾವಗಳನ್ನೂ ಮೀರಿ 'ಭಾರತದ ಪ್ರತೀಕ'ವಾಗಿ ನಿಲ್ಲಬಲ್ಲ ಏಕಮಾತ್ರ ಮೂತರ್ಿ, "ಸ್ವಾಮಿ ವಿವೇಕಾನಂದ"ರು.
ನಮಗೆ ಸ್ವಾಮಿಜಿ ಓರ್ವ 'ಫಾರಿನ್ ರಿಟರ್ನ್ಡ್' ಅಂತ ಗೊತ್ತು, 'ಕೊಲೊಂಬೋ ಇಂದ ಆಲ್ಮೋರದವರೆಗೆ' ಮಿಂಚಿನಂತೆ ಸಂಚರಿಸಿದ್ದು ಗೊತ್ತು, ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಅನ್ನ ಸ್ಥಾಪಿಸಿದರು ಅಂತ ಗೊತ್ತು, ದಾಸ್ಯದ ಸಂಕೋಲೆಯಲ್ಲಿದ್ದ ಸಂತತಿಗೆ ಸ್ವಾಭಿಮಾನದ ಬೆಳಕು ಚೆಲ್ಲಿದರು ಅಂತಲೂ ಗೊತ್ತು. ಆದರೆ ಇದರ ಹಿಂದೆ ಅವರು ಪಟ್ಟಿದ್ದ ಶ್ರಮವನ್ನ ಗುರಿತುಸುವಲ್ಲಿ ಯಾಕೆ ಯಾವತ್ತೂ ನಾವು ಯೋಚನೆಯೇ ಮಾಡಲ್ಲ?! ವಿವೇಕಾನಂದರು ಸಂತರಾಗಿದ್ದು ಅದಾಗಲೇ ಇದ್ದ ಯಾವುದೋ ಒಂದು ಆಶ್ರಮದಲ್ಲಲ್ಲ, ತಾವೇ ನಿರ್ಮಿಸಿದ ಮಠದಲ್ಲಿ. ಆ ನೂತನ ಮಠಕ್ಕೆ ಯಾವದರ ಸೋಂಕು ಇಲ್ಲದಂತೆ(ಅಂದರೆ ಜಾತಿ, ರಾಜಕೀಯ...) ನೋಡಿಕೊಳ್ಳಬೇಕಾದ್ದು ಎಂಥಾ ಸವಾಲಿರಬಹುದು ಯೋಚಿಸಿದ್ದೀವಾ! ಕೇವಲ ಒಂದು ಊರಿನಲ್ಲಿ ಮಾತ್ರವಲ್ಲ, ಆ ಆಶ್ರಮದ ಬೇರು ಬೇರೆ ಬೇರೆ ರಾಜ್ಯಗಳಲ್ಲಿ, ಅಷ್ಟೇಕೆ, ದೇಶಗಳಲ್ಲಿ ಹಬ್ಬುವಂತೆ ಮಾಡಿದರಲ್ಲ, ಅದೇನು ಸಾಮನ್ಯದ ಸಂಗತಿಯೇ?! ದೇವರ ಸ್ಮರಣೆ ಮಾಡುತ್ತ ಮೋಕ್ಷದ ಬಾಗಿಲಿನ ಕಡೆ ಸಾಗಿದ್ದ ಯುವಕರನ್ನ 'ದೀನ ನಾರಾಯಣ'-'ಹೀನ ನಾರಾಯಣನ' ಸೇವೆ ಮಾಡುವ ಮೂಲಕ ಮುಕ್ತಿ ಮಾರ್ಗ ತಲುಪುವಂತೆ ಮಾಡಿದ್ದು ಸುಲಭವಾಗಿತ್ತೇ!? ಅದೆಲ್ಲಾ ಬಿಡಿ, ಯಾವ ಪರಕೀಯರ ಮಾತು ಕೇಳಿಕೊಂಡು ಭಾರತೀಯರು ಸನಾತನ ಮೌಲ್ಯವನ್ನೇ ಮರೆತಿದ್ದರೋ ಅಂಥ ಸನಾತನ ಪರಂಪರೆಯ ಕುರಿತಾಗಿ ಪರಕೀಯರೇ ಗೌರವ ನೀಡುವಂತೆ ಮಾಡಿಬಿಟ್ಟರಲ್ಲ ಸ್ವಾಮಿಜಿ, ವಾಹ್, ಇದಲ್ಲವೇ ನಿಜವಾದ ಸಾಧನೆ? ಇದೇ ತಾನೆ ರಾಷ್ಟ್ರ ಭಕ್ತಿ.
ಏನು, "ಅಮೇರಿಕಾದ ಸೋದರ ಸೋದರಿಯರೇ..." ಅಂದ ಮಾತ್ರಕ್ಕೆ ಜಗತ್ತನ್ನ ಈ ಮಹಾತ್ಮ ಗೆದ್ದುಬಿಟ್ಟ ಅಂತ ಭಾವಿಸಿದ್ದೀರ? ಅಷ್ಟೇ ತಾನೆ ಗೊತ್ತು ನಮಗೆ ಸ್ವಾಮಿಜಿಯ ಬಗ್ಗೆ. ಅಮೇರಿಕಕ್ಕೆ ಹೋದರು, ಜನಮನ ಗೆದ್ದರು, ಭಾಷಣ ಮಾಡಿ ಬಂದರು, ಆಶ್ರಮ ಸ್ಥಾಪಿಸಿ ಕಣ್ಮುಚ್ಚಿದರು. ಇದಾ ಸ್ವಾಮೀಜಿ ಜೀವನ? ಇಷ್ಟು ಸುಲಭವಾಗಿದ್ದದ್ದೇ ಇಲ್ಲ. ಅವರು ಜೀವನಕ್ಕೆ ಕೊಡೋ definationನ್ನೇ ಬೇರೆ, "ನಮ್ಮನ್ನ ಕೆಳಗೆಳಿಯುವ ಪರಿಸರ ಹಾಗೂ ಪರಿಸ್ಥಿತಿಗಳಿಂದ ಮೇಲೇಳುವುದೇ ಜೀವನ" ಅನ್ನೋ ಹೋರಟದ ಅರ್ಥ ಕೊಡೋ ಸ್ವಾಮಿಜಿ ಜೀವನದಲ್ಲಿ ಇನ್ನೆಷ್ಟು ಹೋರಾಡಿರಲಿಕ್ಕಿಲ್ಲ ಯೋಚಿಸಿ. ಬನ್ನಿ, ಸಾಧ್ಯವಾದರೆ ಅವರ ಕೆಲವು ಘಟನೆಗಳನ್ನ ನೋಡೋಣ.
ನರೇಂದ್ರ(ಸ್ವಾಮೀಜಿಯ ಪೂರ್ವದ ಹೆಸರು)ನ ತಂದೆ ತೀರಿಹೋಗಿದ್ದರು. ಮನೆಯಲ್ಲಿ ಊಟ ಬಟ್ಟೆಗೂ ಕಷ್ಟವಿತ್ತು. ನರೇಂದ್ರನೇ ಮನೆಯಲ್ಲಿ ಹಿರಿಯ. ಆಗಷ್ಟೆ ವ್ಯಾಸಂಗ ಮುಗಿದಿತ್ತು. ಎಲ್ಲೂ ಸರಿಯಾದ ಕೆಲಸ ಸಿಕ್ಕಿರಲಿಲ್ಲ. ಯಾವುದೋ ಪುಸ್ತಕ ಅನುವಾದಿಸೋ, ಯಾರೋ ವಕೀಲರ ಕೈಕೆಳಗೆ, ಹೀಗೆ ಚಿಕ್ಕ ಪುಟ್ಟ ಕೆಲಸ ಸಿಕ್ಕಿತು. ಅದು ಎರಡು ಹೊತ್ತಿನ ಊಟಕ್ಕೇ ಸಾಗುತ್ತಿತ್ತು. ಆದರೆ ಮನೆಯನ್ನ ನೋಡಿಕೊಳ್ಳುವುದು ಹೇಗೆ? ಈ ಥರ ಖಾಲಿ ಹೊಟ್ಟೆಯಲ್ಲಿ ಅದೆಷ್ಟು ಸಲ ದಾರಿ ಮಧ್ಯೆ ತಲೆ ಸುತ್ತು ಬಂದು ಕೂತಿದ್ದರೋ. ಒಮ್ಮೆ ಸುಧೀರ್ಘವಾಗಿ ಯೋಚಿಸಿ, ಇದಕ್ಕೆ "ಗುರು ರಾಮಕೃಷ್ಣ"ರೇ ಪರಿಹಾರವೆಂದುಕೊಂಡು ಅವರ ಹತ್ತಿರ ಬಂದ. "ಗುರುಗಳೇ, ನೀವು ದಯಮಾಡಿ, ನನಗೋಸ್ಕರ ನಿಮ್ಮ ಕಾಳಿಯ ಹತ್ತಿರ ನನಗೊಂದು ಕೆಲಸ ಕೊಡಿಸಿಕೊಡಿ" ಅಂತ ಕೇಳಿದ. ರಾಮಕೃಷ್ಣರು ಹೇಳಿದರು "ನೋಡು ನರೇನ್, ನಾನ್ಯಾವತ್ತೂ ಕಾಳಿಯನ್ನ ಅದು ಕೊಡು- ಇದುಕೊಡು ಅಂತ ಕೇಳಿಲ್ಲ. ಅದೇನೋ, ಕೇಳಲೂ ಬಾಯಿಯೂ ಬರಲ್ಲ. ಒಂದು ಕೆಲಸ ಮಾಡು. ಇವತ್ತು ರಾತ್ರಿ ನೀನೇ ಆ ಗರ್ಭಗುಡಿಗೆ ಹೋಗಿ, ನಿನಗದೇನು ಬೇಕೋ ಕೇಳಿಕೋ" ಅಂದರು. ನರೇಂದ್ರ ಅರಾಳವಾಗಿ ಇರುಳಿಗಾಗಿ ಕಾಯುತ್ತಾ ಕೂತ. ರಾತ್ರಿಯಾಯ್ತು. ಹೋದ ದೇವಸ್ಥಾನಕ್ಕೆ.
ಸಾಕ್ಷಾತ್ ಕಾಳಿ ನಿಂತಿದ್ದಾಳೆ ನರೇಂದ್ರನ ಮುಂದೆ. ಆನಂದಾಶ್ರುಗಳು ಹೊರಳಿತು ಕಣ್ಣಿಂದ. ದೀನನಾಗಿ ತಾಯಿಯ ಕಾಲಿಗೆರಗಿ ಬೇಡಿಕೊಂಡ "ಅಮ್ಮಾ, ನನಗೆ ಜ್ಞಾನಕೊಡು-ವೈರಾಗ್ಯ ಕೊಡು" ಅಂತ. ಅದೇ ಭಾವೋನ್ಮತ್ತತೆಯಲ್ಲಿ ಗುರುಗಳ ಹತ್ತಿರ ಬಂದ. ರಾಮಕೃಷ್ಣರು ಕೇಳಿದರು "ಏನಯ್ಯಾ? ಏನುನ್ನ ಕೇಳಿದೆ ಆಕೆನಾ? ಕೊಡ್ತೀನಿ ಅಂದ್ಲೋ?". ನರೇಂದ್ರ ಪೆಚ್ಚಾಗಿ ಹೇಳಿದ "ಅಯ್ಯೋ ಗುರುಗಳೇ, ಹಣಕೊಡು ಅನ್ನೋದನ್ನ ಮರೆತು ಜ್ಞಾನಕೊಡು ಅಂತ ಕೇಳಿಬಿಟ್ಟೆ. ಇನ್ನೊಂದು ಸರಿ ಒಳಗೋಗಿ ಕೇಳಲೇ?". ರಾಮಕೃಷ್ಣರು ಮತ್ತೆ ಒಳಗೆ ಕಳಿಸಿದರು. ಅದೇ ದೇವಿ ಸ್ಮಿತವದನಳಾಗಿ ನಿಂತಿದ್ದಾಳೆ. ಈಗ ನರೇಂದ್ರ ಕೇಳಿದ "ಅಮ್ಮಾ...ಅಮ್ಮ... ಇದೇ ಥರ ಯಾವಾಗ್ಲೂ ದರ್ಶನ ಭಾಗ್ಯ ನೀಡು. ಮತ್ತೇನು ಬೇಡ".
ಹೊರಬರುತ್ತಿದ್ದಂತೆಯೇ ಕೇಳಿದರು ರಾಮಕೃಷ್ಣರು "ಏನಯ್ಯಾ ನರೇನ್? ಕೊಡ್ತಾಳಂತ". ನರೇಂದ್ರ "ಅಯ್ಯೋ, ಗುರುಗಳೇ, ಇನ್ನೊಂದೇ ಒಂದು ಅವಕಾಶ ಕೊಡಿ, ಈ ಸಲವೂ ಮರೆತೇ ಹೋಯ್ತು. ಅವಳ ಪ್ರಸನ್ನ ಮುಖ ನೋಡ್ತಿದ್ರೆ ಕಷ್ಟಗಳೆಲ್ಲವೂ ಮರೆತೇ ಹೋಗುತ್ತೆ. ಇನ್ನೊಂದೇ ಒಂದು ಸಲ..." ಅಂತ ಗೋಗರೆದ. ರಾಮಕೃಷ್ಣರು ಕಳಿಸಿದರು. ಈ ಬಾರಿಯೂ ಚೈತನ್ಯಮಯಿ ಕಾಳಿ ನಿಂತಿದ್ದಾಳೆ. ನರೇಂದ್ರನಿಗೆ ತನ್ನ ಕಷ್ಟ ಹೇಳಿಕೊಳ್ಳಲು ನಾಚಿಕೆಯಾಗಿ "ಅಮ್ಮಾ, ನನಗೆ ಜ್ಞಾನ ಕೊಡು-ವೈರಾಗ್ಯಕೊಡು-ಇದೇ ಥರ ಸದಾ ದರ್ಶನ ಸೌಭಾಗ್ಯ ಕೊಡು, ಇನ್ನೇನು ಬೇಡ" ಅಂದು ಅಡ್ಡಬಿದ್ದು ಹೊರ ಬಂದು, "ಗುರುಗಳೇ, ನಾನೇನು ಮಾಡಲಿ, ಆ ಆದ್ಯಂತ ಪರಾಶಕ್ತಿಯ ಮುಂದೆ ಅಲ್ಪವಾದದ್ದನ್ನ ಕೇಳಲಾರೆ" ಅಂತ ಅಳಲಿದ. ಅವನ ಪರಿಸ್ಥಿತಿ ಅರ್ಥಮಾಡಿಕೊಂಡ ರಾಮಕೃಷ್ಣರು "ಆಯ್ತು, ಇರಲಿ ಹೋಗು, ಇವತ್ತಿಂದ ನಿನ್ನ ಮನೆಯವರಿಗ್ಯಾರಿಗೂ ಅನ್ನ ಬಟ್ಟೆಯ ಕೊರತೆ ಇರಲ್ಲ" ಅಂತ ಅಭಯ ನೀಡಿದರು.
ಅದಾದ ಮೇಲು ನರೇಂದ್ರನ ಕಷ್ಟ ಮಾತ್ರ ತಪ್ಪಲಿಲ್ಲ. ರಾಮಕೃಷ್ಣರು ದೈವಾಕ್ಯವಾಗುವ ಮುನ್ನ ನರೇಂದ್ರ ಹಾಗೂ ಇನ್ನಿತರ ಯುವಕರಿಗೆ ಸನ್ಯಾಸ ದೀಕ್ಷೆಯನ್ನ ಸ್ವೀಕರಿಸುವಂತೆ ಸೂಚಿಸಿದ್ದರು. ಆ ಯುವಕರು "ಗುರುಗಳು ಹೇಳಿದ್ದಾರೆ, ನಾವು ಸನ್ಯಾಸಿಗಳಾಗ್ತೇವೆ" ಅಂದರೆ, "ಅಲ್ಲಯ್ಯಾ, ಸ್ವತಃ ರಾಮಕೃಷ್ಣರೇ ಸಂಸಾರಿಗಳು, ಅವರು ಸನ್ಯಾಸದೀಕ್ಷೆ ಕೊಡೋದೆ" ಅಂತ ನಕ್ಕು ಕೈ ಚೆಲ್ಲಿದರು ರಾಮಕೃಷ್ಣರ ಭಕ್ತರು. ಈಗ ಅವರಾರ ಸಹಾಯವೂ ಇಲ್ಲದೆ ಮಠ ಸ್ಥಪಿಸಬೇಕಾದ ಜವಾಬ್ದಾರಿ ನರೇಂದ್ರನದಾಯ್ತು. ಯುವಕರಿಲ್ಲಿ ಒಂದು ಕ್ಷಣವೂ ಸನ್ಯಾಸದ ಆದರ್ಶ ಮರೆಯಾಗದಂತೆ ಅವರಿಗೆ ನರೇಂದ್ರ ಇಂಬುಕೊಡುತ್ತಿದ್ದ, ಅದಕ್ಕಗಿ ಸಾಕಷ್ಟು ನಿಂದನೆ ಅನುಭವಿಸಿದ್ದ.
ನಂತರ ಪರಿವ್ರಾಜಕರಾದಾಗಲಂತೂ ಪಾಳು ಗುಡಿಗಳಲ್ಲಿ, ಹಾಳು ಗುಡಿಸಲುಗಳಲ್ಲಿ ಕಾಡಿನ ಮಧ್ಯದಲ್ಲಿ ವಾಸವಿದ್ದುಬಿಡುತ್ತಿದ್ದರು. ಇವರೆಲ್ಲೂ ಭಿಕ್ಷೆ ಕೇಳಿಪಡೆಯುತ್ತಿರಲಿಲ್ಲ, ಜನ ಅವರಾಗಿಯೇ ಹಾಕುತ್ತಿರಲಿಲ್ಲ. ಆಗೆಲ್ಲ ಅದೆಷ್ಟೆಷ್ಟು ದಿನಗಳು ಉಪವಾಸವಿದ್ದರೋ! ಒಮ್ಮೆಯಂತು ಹೊಟ್ಟೆ ಹಸಿದು ಪ್ರಾಣವೇ ಹೋಗುವಂತಿದ್ದಾಗ, ಯಾರೋ ಒಬ್ಬ ತನ್ನ ಹತ್ತಿರವಿದ್ದ ರೊಟ್ಟಿ ಚಟ್ನಿ ಕೊಟ್ಟ. ಹಸಿದಿದ್ದರಲ್ಲ, ಒಂಚೂರು ಹೆಚ್ಚಿಗೆಯೇ ಬಾಯಿಗೆ ಹಾಕಿಕೊಂಡರೇನೋ, ಆ ಚಟ್ನಿಯ ಖಾರ ಹೊಟ್ಟೆಯನ್ನೇ ಸುಟ್ಟು ಹಾಕುವಂತಿತ್ತಂತೆ. ಕುಡಿಯಲು ನೀರೂ ಸಿಗದೆ ವದ್ದಾಡಿದ್ದರು.
ಅಷ್ಟೆಲ್ಲಾ ಯಾಕೆ? ಕನ್ಯಾಕುಮಾರಿಯಲ್ಲಿ ಸ್ವಾಮಿಜಿಯ ಬಂಡೆಯಿದೆಯಲ್ಲಾ ಅದನ್ನ ಸ್ವಾಮಿಜಿ ಈಜಿಕೊಂಡೇ ತಲುಪಿದ್ದು. ಯಾಕೆಂದರೆ ಅಲ್ಲಿಗೆ ಕರೆದೊಯ್ಯಬೇಕಿದ್ದ ಅಂಬಿಗರಿಗೆ ಕೊಡಲು ಜೇಬಲ್ಲಿ ಬಿಡಿಗಾಸಿರಲಿಲ್ಲ. ಅಂಥಾ ಸ್ವಾಮೀಜಿ, ಇನ್ನಷ್ಟು ಕಷ್ಟಕಟ್ಟು, ದೇವಿಯ ಕೃಪೆಯಿಂದ, ರಾಮಕೃಷ್ಣರ ಆಶೀವರ್ಾದದಿಂದ ಅಮೇರಿಕೆಗೆ ಹೋದರು. ಅಲ್ಲೇನು ಹೋದ ಕೂಡಲೇ 'ರೆಡ್ ಕಾಪರ್ೆಟ್' ಹಾಸಿ ಸ್ವಾಮಿಜಿಯನ್ನ ಸ್ವಾಗತಿಸಲಿಲ್ಲ. ಇವರು ಭಾಗವಹಿಸಬೇಕಿದ್ದ ಸಮ್ಮೇಳನವಿದ್ದದ್ದು ಸೆಪ್ಟಂಬರ್ನಲ್ಲಿ, ಆದರೆ ಆ ವಿಚಾರ ಸರಿಯಾಗಿ ಖಾತ್ರಯಾಗದೆ ಎರಡು ತಿಂಗಳು ಮೊದಲೇ, ಅಂದರೆ, ಜುಲೈಗೇ ಅಮೇರಿಕಾಕ್ಕೆ ಹೋಗಿದ್ದರು. ಕೈಯಲ್ಲಿ ಕಾಸಿಲ್ಲ, ಯಾರೊಬ್ಬರ ಪರಿಚಯವಿಲ್ಲ. ಆ ವಿಶಾಲ ದೇಶದಲ್ಲಿ ಒಂಟಿಯಾಗಿಬಿಟ್ಟಿದ್ದರು ನಮ್ಮ ಸ್ವಾಮೀಜಿ.
ಆ ಅನ್ಯದೇಶದಲ್ಲಿ ಸ್ವಾಮೀಜಿ ದಾರಿಯಲ್ಲಿ ಹೋಗುತ್ತಿದ್ದರೆ ಪೋಲಿ ಹುಡುಗರು ಪೇಟ ಎಳೆಯುತ್ತಿದ್ದರು, ಬೀದಿ ಹುಡುಗರು ಕೆಟ್ಟದಾಗಿ ಹೀಯಾಳಿಸುತ್ತಿದ್ದರು, ಸಭ್ಯ ಅಮೇರಿಕನ್ನರೂ ಸಹ ಅನಾಗರೀಕರಂತೆ ವತರ್ಿಸಿದರು. ಒಮ್ಮೆಯಂತೂ ಸ್ವಾಮೀಜಿ ಅಮೇರಿಕದಲ್ಲಿ ನಿರಾಶ್ರಿತರಿಗೆ ಅಂತ ಮೀಸಲಿರುವ ಗೂಡ್ಸ್ ವ್ಯಾಗನ್ನಲ್ಲೇ ಮಲಗಿದ್ದರು.
ಸ್ವಾಮೀಜಿ ನೇರವಾಗಿ ಹೋಗಿದ್ದು ಚಿಕಾಗೋ ನಗರಕ್ಕೆ. ಆದರೆ ಅದು ದುಬಾರಿ ಅಂತ ಭಾವಿಸಿ ಬಾಸ್ಟನ್ ನಗರಕ್ಕೆ ಹೊರಟರು. ಆಗ ಅವರಿಗೆ ರೈಲಲ್ಲಲಿ ಪರಿಚಯವಾದ 'ಮಿಸ್ ಕ್ಯಾಥರಿನ್ ಆಬಟ್ ಸ್ಯಾನ್ಬಾನರ್್' ಎಂಬಾಕೆ ಸ್ವಾಮಿಜಿಯ ವಿದ್ವತ್ತನ್ನ ಗುತುತಿಸಿ, ತನ್ನ ಮನೆಗೆ ಆಹ್ವಾನಿಸಿದಳು. ಅಲ್ಲಿ, ಅವಳೂ ಹೇಗೂ ಗ್ರಂಥಕತರ್ೆಯಾಗಿದ್ದರಿಂದ, ಸ್ವಾಮಿಜಿಗೆ ಒಂದಷ್ಟು ಜನ ದೊಡ್ಡಮನುಷ್ಯರ ಲಿಂಕ್ ಸಿಕ್ಕಿತು. ಆಗಲೇ ಹಾರ್ವಡರ್್ ಯೂನಿವಸರ್ಿಟಿಯ ಪ್ರೋಫéೇಸರ್, ಡಾ.ರೈಟ್, ಸ್ವಾಮಿಜಿ 'ಸಮ್ಮೇಳನದಲ್ಲಿ ಮಾತಾಡೋ ಅವಕಾಶವನ್ನ ಬಳಸಿಕೊಳ್ಳೋಕೆ ನನ್ನ ಹತ್ತಿರ ಪರಿಚಯ ಪತ್ರವಿಲ್ಲ' ಅಂದಾಗ ಆ ಪ್ರೋಫéೇಸರ್ "ಸ್ವಾಮೀಜಿ, ನಿಮ್ಮ ಹತ್ರ ಪರಿಚಯ ಪತ್ರ ಕೇಳೋದು ಒಂದೆ, ಸೂರ್ಯನನ್ನ ನೀನ್ಯಾಕಯ್ಯ ಬೆಳಕನ್ನ ಕೊಡ್ತೀಯಾ? ಅಂತ ಕೇಳೊದು ಒಂದೆ" ಅಂತ ಹೊಗಳಿ "ನೀವು ಸಮ್ಮೇಳನದಲ್ಲಿ ಮಾತಾಡಲೇ ಬೇಕು" ಅಂತ ಇವನೇ ಒಂದು ಪತ್ರ ಬರೆದುಕೊಟ್ಟ. ದುರಾದೃಷ್ಟವಷಾತ್ ಆ ಪತ್ರವೂ ಕಳೆದು ಹೋಗಿ, ಸ್ವಾಮೀಜಿ ಅಮೇರಿಕದ ಬೀದಿಗಳಲ್ಲಿ ಕೈ ಕೈ ಹಿಚುಕಿಕೊಳ್ಳಬೇಕಾಯ್ತು.
ದಾರಿ ಗೊತ್ತಿಲ್ಲ, ದೆಸೆ ಗೊತ್ತಿಲ್ಲ, ಎಲ್ಲಿ ಹೋಗಿ ಏನು ಮಾಡಬೇಕು ಸ್ವಾಮೀಜಿ ಆ ಚಿಕಾಗೋದಲ್ಲಿ?ಸಮ್ಮೇಳನ ಅಡ್ರೆಸ್ ಕೇಳಿದರೂ ಕೂಡ ಯಾರೊಬ್ಬರೂ ಹೆಳಲಿಲ್ಲ ಸ್ವಾಮಿಜಿಗೆ. ಸುತ್ತಾಡಿ ಸುತ್ತಾಡಿ ಸಾಕಾಗಿ ಆಯಾಸ ತಾಳಲಾರದೆ ಸುಸ್ತಾಗಿ ರಸ್ತೆಯ ಬದಿಗೇ ಕೂತರು. ಭಗವದ್ಕೃಪೆ, ಅವರು ಕೂತಿದ್ದ ಬೀದಿಯ ಎದುರಿಗೇ ಇದ್ದ ಬಂಗಲೆಯ ವೃದ್ಧ ಮಹಿಳೆ, ಬೆಲ್ಹೇಲ್ ಎಂಬಾಕೆ, ಸ್ವಾಮೀಜಿಯನ್ನ ಗೌರವದಿಂದ ತನ್ನ ಬಂಗಲೆಯೊಳಗೆ ಕರೆದೊಯ್ದು, ಉಪಚರಿಸಿ, 'ನಿಮಗೆ ಸಮ್ಮೇಳನದಲ್ಲಿ ಮಾತಾಡೋ ಅವಕಾಶ ಕೊಡಿಸೋ ಜವಾಬ್ದಾರಿ ನನ್ನದು' ಅಂದಳು. ಅಂತೆಯೇ ಸ್ವಾಮೀಜಿ ಭಾರತದ ಇತಿಹಾಸದ ಪುಟದಲ್ಲಿ ಸ್ವಣರ್ಾಕ್ಷರದಲ್ಲಿ ಬರೆದಿಡುವಂತೆ ಸೆಪ್ಟಂಬರ್ 11, 1893 ರಲ್ಲಿ ಭಾರತವನ್ನ ಜಗತ್ತಿಗೆ ಪರಿಚಯಿಸಿದರು.
ಈ ಸಮ್ಮೇಳನಾನಂತರವೇನು ಸ್ವಾಮೀಜಿಯ ಜೀವನ ಸುಖಮಯವಾಗಿದ್ದಿಲ್ಲ. ಜೀವನ ಪರ್ಯಂತ ಇಂಥದ್ದೇ ಹೋರಟಗಳನ್ನ ನಡೆಸಿದ್ದಾರೆ. ಅಷ್ಟೆಲ್ಲ ಕಷ್ಟಗಳನ್ನ ಜಯಿಸಿದ್ದಕ್ಕಾಗಿಯೇ ಇಂದು ಅವರನ್ನ "ವಿಶ್ವವಿಜೇತ" ಅನ್ನೋದು, ಇವತ್ತಿಗೂ ಅವರ ಜನ್ಮದಿನವನ್ನ "ರಾಷ್ಟ್ರಿಯ ಯುವದಿನ"ವನ್ನಾಗಿ ಆಚರಿಸುವ ಮೂಲಕ ಸ್ಮರಿಸುತ್ತಿರೋದು. ಆ ಅದಮ್ಯ ಚೇತನಕ್ಕೆ ಅನಂತ ನಮನ...
"...ನೀನು ಮಿಂಚೈ! ನೀನು ಸಿಡಿಲೈ! ಮೊಳಗು ಸನ್ಯಾಸಿ-
ಓಂ! ತತ್! ಸತ್! ಓಂ!..."
-ನಾದೀ

ಇಂಟ್ರುನೆಟ್ಟು!

  ಅವನ ಹೆಸರು ವೀರೇಶ ಅಂತ. ಸರ್ಕಾರಿ ಕಾಲೇಜೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಇಬ್ಬರು ಮಕ್ಕಳು, ಒಬ್ಬಳು ಹೆಂಡತಿ, ಇನ್ನೊಬ್ಬಳು ಹೆಂಡತಿ ಅಲ್ಲ. ಹಾಗಾಗಿಯೇ ಅವರಿಬ್ಬರು ಕಿತ್ತಾಡಿಕೊಂಡು ಈಗ ಇವನನ್ನ ಬಿಟ್ಟು ಹೋಗಿದ್ದಾರೆ. ಅದು ಬೇರೆ ಕತೆ, ಇನ್ನೊಮ್ಮೆ ಅದರ ಬಗ್ಗೆ ಹೇಳ್ತೀನಿ.

ಆ ಕಾಲೇಜಿನ ಹುಡುಗರೆಲ್ಲ ಹರೆಯವನ್ನ ಇನ್ನೇನು ಮುಗಿಸುವ ವಯಸ್ಸಿನವರು. co-ed. ವಾಡಿಕೆಯಂತೆ ಪ್ರೇಮಿಗಳು ಇರುತ್ತಿದ್ದರು. ಒಂದಾದ ಪ್ರೇಮಿಗಳು ಮರದ ಮೇಲೆ ತಮ್ಮ ಹೆಸರನ್ನ ಕೆತ್ತಿಕೊಂಡರೆ, one way ಪ್ರೇಮಿಗಳು ಯಾರೋ ಬರೆದಂತೆ ತಮ್ಮ ಹಾಗೂ ತಮ್ಮ ಭಾವೀ ಅಥವಾ ಅಭಾವಿ ಪ್ರೇಯಸಿಯ ಹೆಸರನ್ನ boardನ ಮೇಲೆ ಬರೆದುಕೊಳ್ಳುತ್ತಿದ್ದರು. ಇಂಥ ಪ್ರೇಮಿಗಳಿಗೆಲ್ಲ ವೀರೇಶ ಲವ್ ಗುರು. ಜೋಡಿ ಹುಡುಕಿ ಕೊಡೋದು, ಲವ್ ಲೆಟರ್ ಬರೆದುಕೊಡೋದು, break up ಆದಾಗ ಒಂದಾಗಿಸೋದು, ಈ ಥರದ್ದೆಲ್ಲ ಮಾಡುತ್ತಿದ್ದ. ಅದಕ್ಕೇನು ದುಡ್ಡು ಕೇಳುತ್ತಿರಲಿಲ್ಲ. ಸಂಜೆ ಸಮಯ party ಕೊಡಿಸಿದರೆ ಸಾಕಿತ್ತು.

ಕಾಲೇಜು ಹೇಗೋ ಹಾಗಿತ್ತು. ವಿಪರೀತ ಪಾಠ ಮಾಡುವ lecturers, ಕಾಲೇಜಿಗೆ ಬಂದರೂ long absent ನೀನು ಅನ್ನುವ principal, ಎಲ್ಲಾ ದಾಖಲೆ ಕೊಟ್ಟಿದ್ದರೂ ಏನೋ ಒಂದು ಕೊಂಕು ಹೇಳುವ clerk. ಇವರೆಲ್ಲರ ಮಧ್ಯೆ ಕಾಲೇಜಿನ ಏಕಮಾತ್ರ ಆಕರ್ಷಣೆಯಾಗಿ ಉಳಿದದ್ದು ವೀರೇಶಿ ಮಾತ್ರ. ಹುಡುಗರಿಗೆಲ್ಲ ಅವನನ್ನ ಕಂಡರೆ ಅಚ್ಚು ಮೆಚ್ಚು. ಹುಡುಗಿಯರಿಗೂ ಅಷ್ಟೆ. ಆಗಾಗ ಮೈ ಮುಟ್ಟಿ ಮಾತಾಡಿಸಿದ್ದಕ್ಕೆ ಒಂದಿಬ್ಬರು ಹೊಡೆದದ್ದು ಬಿಟ್ಟರೆ ಬೇರಿನ್ನೇನು caseಗಳಿರಲಿಲ್ಲ.

ಅದೊಂದು ದಿನ ಯಾವುದೋ company ಕಾರು ಬಂದು ಕಾಲೇಜಿನ ಮುಂದೆ ನಿಂತಿತು.  ಅದರಿಂದ ಇಳಿದು ಬಂದ ಮೂವರು ಟೈ ಧಾರಿಗಳು ನೇರ ಆಫೀಸ್ ರೂಮಿಗೆ ಹೋಗಿ, ಪ್ರಿನ್ಸಿಪಾಲರ ಕೈಕುಲುಕಿ, ಏನೇನೋ ಮಾತಾಡುತ್ತಿರವಾಗ ಅವರಿಗೆ tea ಕೊಡಲು ವೀರೇಶಿ ಒಳಗೆ ಹೊದಾಗ ಗೊತ್ತಾಯಿತು, ಅವರು ಬಂದಿರೋದು ಕಾಲೇಜಿಗೆ ಕಂಪ್ಯೂಟರ್ ಕೊಡೋಕೆ ಅಂತ. ವಿಷಯ ತಿಳಿದ ಕೂಡಲೆ ತನ್ನ ನೆಚ್ಚಿನ ಗ್ಯಾಂಗ್ ಗೆ ತಿಳಿಸಿದ. ಸುದ್ದಿ ಹಬ್ಬಿತು. ಮರುದಿನ ಬೆಳಗ್ಗೆ ಪ್ರಿನ್ಸಿಪಾಲರು ''ಪ್ರಿಯ ವಿದ್ಯಾರ್ಥಿಗಳೆ, ನಿಮಗೆಲ್ಲ ವಂದು ಸಪ್ರೈಸ್...'' ಅಂದು ಈ ಮಾತು ಹೇಳಿದಾಗ ಯಾರೊಬ್ಬರೂ ತಮಾಷೆಗೂ surprise ಆಗಲೇ ಇಲ್ಲ.

ಒಂದು ವಾರದಲ್ಲಿ 5ಕಂಪ್ಯೂಟರ್ ಬಂತು. ಅವನ್ನ ಯಾರೆಂದರೆ ಅವರು ಮುಟ್ಟುವ ಹಾಗಿಲ್ಲ. ಅದರ ಜವಾಬ್ದಾರಿ ವೀರೇಶಿಯದ್ದು. ಅವನು ಹ್ಞೂಂಕರಿಸಿದರೆ ಮಾತ್ರ ಬಳಸಲಾಸ್ಪದ. ಹೀಗಿದ್ದ ಪರಿಸ್ಥಿಯಲ್ಲಿಯೇ, english ಟೀಚರ್ ಹೆದಳಿದರು ಅಂತ internet ಹಾಕಿಸಿದರು ಪ್ರಿನ್ಸಿಪಾಲ್.

ಕಾಲೇಜಿಗೆ internet ಬಂದ ಮೇಲೆ ಅದರ lookಕೇ ಬದಲಾಗಿ ಹೋಯ್ತು. ಯಾರೊಬ್ಬರೂ absent ಆಗಲಿಲ್ಲ. ಅದು ಇದು ಅಂತ download ಮಾಡುತ್ತಲೇ ಇದ್ದರು. ಅವಾವುವೂ ಪ್ರಯೋಜಕ್ಕೆ ಬರದ sylubus ಎಂಬುದು ವೀರೇಶನಿಗೆ ಗೊತ್ತಾಯಿತು. ಒಂದ ವಾರಗಳ ಬಳಿಕ ಪ್ರಿನ್ಸಿಪಲ್ ಊರಲ್ಲಿರಲಿಲ್ಲ, ಆಗ ವೀರೇಶಿ ಅದರಲ್ಲೂ buisiness ಮಾಡತೊಡಗಿದ. ವಿಡಿಯೋ ನೋಡೋದಾದರೆ ಗಂಟೆಗಿಷ್ಟು, print ಬೇಕಿದ್ದರೆ ಪೇಜಿಗಿಷ್ಟು ಅಂತ ರೇಟ್ ಫಿಕ್ಸ್ ಮಾಡಿದ. ಅದೇನು, ಕೇಳವಲ ಹತ್ತು ರೂಪಾಯಿ. ಯಾರೊಬ್ಬರಿಗೂ ಅದು costly ಎನಿಸಲಿಲ್ಲ. ವ್ಯಪಾರ ಶುರುವಾಯ್ತು.

ಸ್ವಲ್ಪ ದಿನವಾದ ಮೇಲೆ ವೀರೇಶಿಗೆ ತಾನೂ ವಿಡಿಯೋ ನೋಡಬೇಕು ಅನ್ನಿಸಿತು. ಯಾವೊಬ್ಬರೂ ಇರಲಿಲ್ಲ ಆ ಹೊತ್ತು. video site ತೆಗೆದ, 'kannada o' ಅಂತ ಒತ್ತುತ್ತಿದ್ದಂತೆಯೇ ಒಂದಷ್ಟು suggestion ಬಂತು. ಯಾವುದೋ ಒಂದನ್ನು ಒತ್ತಿದ. ಕನ್ನಡ ಹಳೇ ಹಾಡುಗಳ ಪಟ್ಟಿ ತೆರೆದುಕೊಂಡಿತು. ಚೆನಾಗೆನ್ನಿಸಿತು. ಹೀಗೆ ಕೆಲವು ವಿಡಿಯೋ ನೋಡುತ್ತಾ, ಹುಡುಕುತ್ತಿರುವಾಗ ಕಂಡಿತು '...hot photoshoot' ಅಂತ. ಅವಳು ನೆಚ್ಚಿನ ನಟಿ ಬೇರೆ. ತೆರೆದುಕೊಂಡಿತು ವಿಡಿಯೋ. ಪುಳಕಿತನಾಗಿ ಹೋದ ವೀರೇಶ! ಒಬ್ಬನೇ ಉದ್ಗರಿಸಿದ ''ಹ್ಞಾ!! ಇದೆಲ್ಲಾ ಇದರಲ್ಲೂ ಇರುತ್ತಾ...!!!''

free internet, ಕೇಳಬೇಕೆ? 8ಕ್ಕೆ ಬರುತ್ತಿದ್ದ ವೀರೇಶ 7ಕ್ಕೇ ಬಂದು ಬಾಗಿಲು ತೆಗೆದು ಇಂಟರ್ ನೆಟ್ ನೋಡುತ್ತಿದ್ದ. ಯಾವಾಗಲೂ ಎರಡು ಪೇಜ್ ಓಪನ್ ಇರುತ್ತಿತ್ತು. ಒಂದು ''...hot...'' ಇನ್ನೊಂದು ''images of god''! ಇದು ನಿತ್ಯದ ಕಥೆ. ಬರು ಬರುತ್ತಾ ವೀರೇಶಿಗೆ ಮಾತಿನ ವ್ಯಾಮೋಹ ಕಡಿಮೆಯಾಯ್ತು. ಯಾರೂ ತನ್ನ ಹತ್ತಿರ ಬಾರದಂತೆ ಮಾಡಿಕೊಂಡ, privacyಗಾಗಿ. ವೀರೇಶಿ ಪಕ್ಕ ಇರುತ್ತಿದ್ದದ್ದು ಅವನ ಖಾಸ ಶಿಶ್ಯವರ್ಗ ಮಾತ್ರ. ಅದು ವಿಡಿಯೋ ಮುಗಿಯೋ  ತನಕ ಅಷ್ಟೆ.

ಗಣಿತದ ಮೇಷ್ಟ್ರಿಗೂ ಕೆಮಿಸ್ಟ್ರೀ ಟೀಚರ್ ಗೂ ಜಗಳ. periodic tableಗೆ ಹೊಸ ವಸ್ತು ಸೇರಿದೆ ಅಂತ ಆಯಪ್ಪ, ಸೇರಿಲ್ಲ ಅಂತ ಈಯಮ್ಮ. ಇನ್ನಾರು ಉತ್ತರಿಸಬಲ್ಲರು ಗೂಗಲಾಚಾರ್ಯರಲ್ಲದೆ? ಹೋದರು, ಕಂಪ್ಯೂಟರ್ ಲ್ಯಾಬಿಗೆ. ಅವರು ವೀರೇಶಿ ಕೂತಿದ್ದ ಕಡೆ ಹೋಗುತ್ತಿದ್ದಂತೆಯೇ ಎಲ್ಲಾ 'ಇಂಟೂ' ಒತ್ತಿ ತಡಬಡಿಸುತ್ತಾ ಮೇಲೆದ್ದು 'ಬನ್ನಿ ಸಾ...' ಅಂತ ಸೀಟು ಬಿಟ್ಟುಕೊಟ್ಟ. ಗಣಿತದವರು 'ನೋಡಿ ಮೇಡಂ, ಇದ್ರಲ್ಲಿರುತ್ತೆ' ಅಂತ search engine ತೆರೆಯುತ್ತಿದ್ದಂತೆಯೇ ಕಂಡವು, bikiniಯಾದಿ ಉಡುತೊಟ್ಟ ಲಲನೆಯರು. ಮೆಡಮ್ಮಿಗೆ ಸಿಟ್ಟು ಬಂತೋ, ನಾಚಿಕೆ ಬಂತೋ ಗೊತ್ತಿಲ್ಲ. 'ಯಾ ಓಗಿ ಸಾರ್' ಅಂತ ಗಣಿತದವರ ಬೆನ್ನು ಗುದ್ದಿ ಓಡಿದಳಯ. ಮೇಷ್ಟ್ರು ಇದೆಲ್ಲ ಇಲ್ಯಾಕೆ ಬಂತೋ ಗೊತ್ತಾಗದೆ ತಬ್ಬಿಬ್ಬಾದರು. ವೀರೇಶಿ ನಡುಗುತ್ತಿದ್ದ, ಮುಂದಿನ ಪರಿಣಾನವನ್ನ ನೆನೆಯುತ್ತ. ಮೇಷ್ಟ್ರು ವೀರೇಶಿಗೆ ದೈನ್ಯದಿಂದ ಹೇಳಿದರು ''ವೀರು, ನಂಗೂ ಇದುಕ್ಕೂ ಏನು ಸಂಭಂಧ ಇಲ್ವೋ. ಇನ್ನು ನಾನೇನೂ ನೋಡೇ ಇರಲಿಲ್ಲ. ಇದು ಹೇಗೆ ಬಂತೋ ಗೊತ್ತಿಲ್ಲ'' ಅಂತ ಅಳಲಿದರು. ವೀರೇಶೀ, 'ಸಾ... ಇದೆಲ್ಲ ಏನೂ ಮಾಡಾಕಾಗಲ್ಲ ಸಾ. ಇಂಟ್ರುನೆಟ್ಟಂದ್ರೆ ಇಂಗೇನೆ. ಏನಾರ ಒತ್ರಿ, ಇದೇ ಬರದು. ವಾಗಿ ಸಾ, ಏನೂ ಆಗಲ್ಲ' ಅಂದು ಭರವಸೆ ತುಂಬಿ ಕಳಿಸಿದ. ಸಧ್ಯ, ವೀರೇಶಿ ಮರ್ಯಾದೆ ಉಳಿಯಿತು, ಅಲ್ಲದೆ ಸುದ್ದಿ ಬೇರೆ, ಆ ಗಣಿತ ಮೇಷ್ಟ್ರು ಕೆಮಿಸ್ಟ್ರಿ ಮೇಡಮ್ಮು ಫ್ರೆಂಡ್ಸ್ ಆದ್ರೂ ಅಂತ. ಕಾರಣ ಗೊತ್ತಿರೋದು ವೀರೇಶಿಗೆ ಮಾತ್ರ.

ಒಂದೊಳ್ಳೆ ಮಳೆ ಬೀಳುತ್ತಿದ್ದ ಸಂಜೆ. ಹುಡುಗರೆಲ್ಲ ಕಂಪ್ಯೂಟರಲ್ಲಿ ಏನೋ project ಮಾಡಿಕೊಳ್ಳುತ್ತಿದ್ದರು. ವೀರೇಶಿ ಒಂಟಿಸಲಗದಂತೆ ಸುಖಸಾಗರಾನುಭವ ಪಡೆಯುತ್ತಿದ್ದ, ಅದು ಜಗದೇಕ ಸುಂದರಿಯರ ಸಮಕ್ಷಮದಲ್ಲಿ. ನೋಡುವಾಗ ಅದೇನು ಒತ್ತಿದನೋ ಏನೋ, ಕಂಪ್ಯೂಟರ್ ಒಂದು ಕ್ಷಣ 'ಚುರ್ರ್...' ಅಂದು ಆಫ್ ಆಗಿದ್ದು ಆನ್ ಆಗಲೇ ಇಲ್ಲ! ಹುಡುಗರು ಹೇಳಿದರು 'ವೈರಸ್ ಅಟಾಕ್ ಅಗೈತೆ' ಅಂತ. ವೀರೇಶಿಗೆ ಬೇಜಾತಾಯ್ತು, ಇಂಥದ್ದನ್ನ ನೋಡದೆ ಹೋದೆನಲ್ಲಾ ಅಂತ.

ಪ್ರಿನ್ಸಿಪಲ್ ಬಂದ ಕೂಡಲೇ ಮಾಡಬೇಕಿದ್ದ ಮೊದಲ ಕೆಲಸ techniciansನ ಕರೆಸಿ computer ಸರಿ ಮಾಡಿಸೋದು. ಅದಕ್ಕೆ ಕಂಪ್ಯೂಟರ್ ನೀಡಿದ್ದವರನ್ನೇ ಕರೆಸಿದ. ಪಾಪ, ಬಂದರು. ಒಂದು anti virus ಹಾಕಿಕೊಡಲು ಶುರು ಮಾಡಿದರು. ಅಷ್ಟರಲ್ಲೆ inspectionಗಾಗಿ ಇಬ್ಬರು officerಗಳು ಬಂದರು. ಅವರ ಜೊತೆ ಮಾತಾಡಬೇಕು ಅಂತಿದ್ದ ತನ್ನ ಸ್ನೆಹಿತರಿಬ್ಬರನ್ನೂ ಪ್ರಿನ್ಸಿಪಾಲರು ಕರೆಸಿದರು. ಮಾತು ಕತೆ meeting ಶುರುವಾಯ್ತು. ವೀರೇಶಿ ತನ್ನ ಪಾಡಿಗೆ ತಾನು 'ಇನ್ನು ಏನ್ ನೋಡೋದು ಬಾಕಿ ಇದೆ' ಅಂತ ಯೋಚಿಸುತ್ತಿದ್ದ. ಅತ್ತ, computer ರಿಪೇರಿ ಮಾಡುವ ಕಡೆಯಿಂದ ವಿಲಕ್ಷಣ ಹೆಣ್ಣಿನ ದನಿ ಕೇಳಿತು. ಇಡೀ ಸಭೆ ಅತ್ತ ಕಿವಿ ಹಾಯಿಸಿತು! ಆ ಅಪರಿಚಿತ ದನಿ ಅಲ್ಲಿ ಗೊತ್ತದ್ದದ್ದು ವೀರೇಶಿಗೆ ಮಾತ್ರ.

ಒಂದ ವೇಳೆ, ಆ computer ಸರಿ ಮಾಡುವವರು ತಾನು ನೋಡಿದ history ತೋರಿಸದೇ ಇದ್ದಿದ್ದರೆ 'ಸಾ...ಇದೆಲ್ಲ ಇಂಟ್ರುನೆಟ್ಟಲ್ಲಿ ಮಾಮೂಲಿ ಸಾ...' ಅಂದುಬಿಡುತ್ತಿದ್ದ ವೀರೇಶಿ. ಆದರೆ ಈಗ ಹಾಗಗಲ್ಲ. ಸಾಕ್ಷಿ ಸಮೇತ ಸಿಗೆ ಬಿದ್ದಿದ್ದ. ಮುಖ ಪೆಚ್ಚಾಯಿತು. ಪ್ರಿನ್ಸಿಪಾಲರಿಗೆ ಅವರೆಲ್ಲರ ಮುಂದೆ ಮರ್ಯಾದೆ ಹತವಾಯಿತು. ಕೃದ್ಧರಾಗಿಹೋದರು.

ಕಂಪ್ಯೂಟರ್ ಕೊಟ್ಟಿದ್ದವರು ''ನೀವು ತುಂಬಾ ಚೆನಾಗಿ use ಮಾಡಿಕೊಂಡಿರೋದು ಗೊತ್ತಾಗ್ತಾ ಇದೆ. ಸಾಕು. ಇಷ್ಟೇ ನಮ್ಮಿಂದಾಗೋದು'' ಅಂದು ಕಂಪ್ಯೂಟರ್ ಒತ್ತೊಯ್ದರು. ವೀರೇಶ ಅವರೆಲ್ಲರ ಕಣ್ಣುಗಳಲ್ಲಿ ಸಣ್ಣವನಾದ. ತನಗೇ ತಾನು ಹೇಳಿಕೊಳ್ಳಲೂ ಸಹ ಯಾವ ಸಮಾಧಾನವೂ ಕಾಣಲಿಲ್ಲ. ತಪ್ಪು ಮಾಡೋದು ತಪ್ಪಲ್ಲ, ಸಿಕ್ಕಿ ಹಾಕಿಕೊಳ್ಳುದು ತಪ್ಪು ಅನಿಸಿತು. ಎಲ್ಲರೂ ಹೋದರು. ವೀರೇಶಿ ಯಾರ ಮಾತನ್ನೂ ಕೇಳುವ ಅವಶ್ಯಕತೆತಿಲ್ಲವೆಂಬಂತೆ ಅಲ್ಲಿಂದ ಹೊರಟ. ಹೋಗುವಾಗ 'ಈ ವಯಸ್ಸಿನಲ್ಲಾದರೂ ಸ್ಕೂಲಿಗೆ ಬರೋದು ತಪ್ಪಿತಲ್ಲ' ಅಂದುಕೊಂಡ. computer ಕೋಣೆ ಮತ್ತೆ ಹಳೆ ಸಾಮಾನುಗಳ ಗೂಡಾಯಿತು.

ವೀರೇಶಿ ಕೆಲಸ ಕಳೆದುಕೊಂಡಿದ್ದ. ಆದರೆ ಕೈ ತುಂಬಾ ಹಣ ಮಾಡಿಕೊಂಡ. ಹೇಗಂತಿರಾ? ತಾನೇ ಒಂದು ಇಂಟರ್ ನೆಟ್ ಅಂಗಡಿಯಿಟ್ಟ. ಗಂಟೆಗೆ 40ರೂಪಾಯಿ. cityಗಿಂತ ಹತ್ತು ರುಪಾಯಿ ಜಾಸ್ತಿ. ಯಾಕೇಳಿ? ಇಲ್ಲಿ ಇದ್ದದ್ದು ಒಂದೇ ಇಂಟರ್ ನೆಟ್ಟು...

ನಾದೀ

ಊರ್ಮಿಳೆಯ ತಪಸ್ಸು!

ಊರ್ಮಿಳೆಯ ತಪಸ್ಸು..! ‘ಅಷ್ಟೇನಾ..? ಅಷ್ಟಾಕ್ಕೆ ಅಪ್ಪಾಜಿ ಹೀಗೆ ಚಿಂತಾಕ್ರಾಂತರಾದ್ರಾ? ಈಗೋ, ಇವತ್ತೇ, ಈಗಲೇ ಹೊರಟೆ. ನೀವೇನು ಯೋಚಿಸಬೇಡಿ. ಅಪ್ಪ ಕೊಟ್ಟ ಮಾತನ್ನ ...